ಹೊಸದಿಗಂತ ವರದಿ, ಕಲಬುರಗಿ
ದೇಶದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡಿ,ದೇಶದ 140 ಕೋಟಿ ಜನತೆಗೆ ಅವಮಾನ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಪ್ರಿಯಾಂಕ್ ಖಗೆ೯ ಅವರ ಠೇವಣಿಯನ್ನು ಕಳೆಯಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರೆ ನೀಡಿದರು.
ಅವರು ಭಾನುವಾರ ಚಿತ್ತಾಪುರ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಅವರ ಪರ ಪ್ರಚಾರಕ್ಕಾಗಿ ವಾಡಿಗೆ ಆಗಮಿಸಿ,ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು.
ಮೋದಿ 140 ಕೋಟಿ ಜನರ ಪ್ರಧಾನಿ ಯಾಗಿದ್ದಾರೆ,ಅವರಿಗೆ ಅವಮಾನ ಮಾಡಿದರೇ,ಎಲ್ಲರಿಗೂ ಅವಮಾನ ಮಾಡಿದ ಹಾಗೇ.ಅವರನ್ನು ಅವಮಾನ ಮಾಡಿದ ಮಲ್ಲಿಕಾರ್ಜುನ ಖರ್ಗೆ ಅವರ ಮಗನ ಠೇವಣಿ ಜಪ್ತಿ ಯಾಗುವಂತೆ ನಮ್ಮ ಅಭ್ಯರ್ಥಿ ಯನ್ನು ಬೆಂಬಲಿಸುವಂತೆ ಕರೆ ನೀಡಿದರು. ಈ ಹಿಂದೆ ಕಲಬುರಗಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗ಼ಳಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿನ ರುಚಿಯನ್ನು ಇಲ್ಲಿಯ ಜನರು ತೋರಿಸಿದ್ದಾರೆ.ಅದೇ ರೀತಿ ಬೃಹತ್ ಬಹುಮತದಿಂದ ಮಗನಾದ ಪ್ರಿಯಾಂಕ್ ಖಗೆ೯ ಅವರನ್ನು ಸಹ ಮನೆಗೆ ಕಳುಹಿಸಿ ಎಂದು ಹೇಳಿದರು.
ಚಿತ್ತಾಪುರ ಮೀಸಲು ಕ್ಷೇತ್ರ ಯಾರ ಜಾಗೀರು ಅಲ್ಲ.ಬದಲಾವಣೆ ಅವಶ್ಯಕವಾಗಿದ್ದು,ಈ ಬಾರಿ ಉತ್ಸಾಹಿ ಯುವಕನಾದ ಮಣಿಕಂಠ್ ರಾಠೋಡ್ ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿ ಶಕ್ತಿಯನ್ನು ಹೆಚ್ಚಿಸಬೇಕು ಎಂದರು.