ಹೊಸದಿಗಂತ ಡಿಜಿಟಲ್ ಡೆಸ್ಕ್ :
ರಾಜ್ಯದಲ್ಲಿ ಪದವಿಪೂರ್ವ ಕಾಲೇಜು ಪರೀಕ್ಷೆಗಳಿಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಹಾಜರಾಗಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಗೆ ಹೋಳಿ ನಂತರ ಪೀಠ ರಚಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಮುಂದಿನ ವಾರ ಪರೀಕ್ಷೆಗಳು ಆರಂಭವಾಗಲಿದ್ದು, ಈ ಕುರಿತು ಹೋಳಿ ನಂತರ ವಿಚಾರಣೆ ನಡೆಸುವುದಾಗಿ ಸುಪ್ರೀಂ ತಿಳಿಸಿದೆ.
“ವಿದ್ಯಾರ್ಥಿಗಳು ಈಗಾಗಲೇ ಒಂದು ವರ್ಷ ಕಳೆದುಕೊಂಡಿದ್ದಾರೆ, ಅವರು ಇನ್ನೊಂದು ವರ್ಷ ಕಳೆದುಕೊಳ್ಳುತ್ತಾರೆ” ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ವಕೀಲರು ಪ್ರಸ್ತಾಪಿಸಿದರು.
“ನೀವು ಕಡೆಯ ದಿನಾಂಕದಂದು ಬಂದಿದ್ದೀರಿ, ರಜೆಯ (ಹೋಳಿ) ನಂತರ ನಾವು ಈ ವಿಚಾರವನ್ನು ಆಲಿಸುತ್ತೇವೆ” ಎಂದು ಪೀಠವು ವಕೀಲರಿಗೆ ತಿಳಿಸಿದೆ.