ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಕುಸ್ತಿಪಟು ಸುಶೀಲ್ಕುಮಾರ್ ಹೆಚ್ಚಿನ ಪ್ರೊಟೀನ್ಯುಕ್ತ ಆಹಾರಕ್ಕಾಗಿ ಸಲ್ಲಿಸಿದ್ದ ಮನವಿಯನ್ನು ಆಲಿಸಿರುವ ದೆಹಲಿಯ ರೋಹಿಣಿ ಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಭಾರತಕ್ಕೆ 2 ಒಲಿಂಪಿಕ್ಸ್ ಪದಕ ತಂದುಕೊಟ್ಟಿರುವ ಸುಶೀಲ್ ಕುಮಾರ್, ಕುಸ್ತಿಪಟು ಸಾಗರ್ ರಾಣಾ ಧಂಕರ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು, ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಯ ನಂತರ ಮಂಡೋಲಿ ಜೈಲಿನ 15ನೇ ನಂಬರ್ ಕೋಣೆಯಲ್ಲಿ ಇರಿಸಲಾಗಿದೆ.
ಜೈಲಿನಲ್ಲಿ ಸುಶೀಲ್ ಕುಮಾರ್ ಅವರ ಆಹಾರ ಪದ್ಧತಿ ಕುಂಠಿತವಾಗಿದ್ದು, ಅವರಿಗೆ ರೋಟಿ, ತರಕಾರಿ ಹಾಗೂ ಹಾಲಿನ ಜೊತೆ ಹಣ್ಣುಗಳನ್ನು ನೀಡಲಾಗುತ್ತಿದೆ. ಆದರೆ, ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುವಾಗಿರುವ ಅವರು, ತಮ್ಮ ದೇಹದ ತೂಕ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳಲು ಹೆಚ್ಚಿನ ಪ್ರೊಟೀನ್ ಯುಕ್ತ ಆಹಾರ ಬೇಕೆಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೇ ಸುಶೀಲ್ ಕುಮಾರ್ ಈಗಾಗಲೇ ಜೈಲಿನಲ್ಲಿ ವ್ಯಾಯಾಮ ಮತ್ತು ಕುಸ್ತಿಗೆ ಸಂಬಂಧಿಸಿದ ಮೂವ್ಗಳ ಅಭ್ಯಾಸವನ್ನು ಆರಂಭಿಸಿದ್ದು, ತಮ್ಮ ದೇಹದ ಸ್ಥಿತಿ ಕಾಪಾಡಿಕೊಳ್ಳಲು ಜೈಲಿನೊಳಗೂ 38 ವರ್ಷದ ಕುಸ್ತಿಪಟು ಸಾಕಷ್ಟು ಕಠಿಣ ಪರಿಶ್ರಮ ಪಡುತ್ತಿದ್ದಾರೆ.
ಮೇ 23ರಂದು ದೆಹಲಿ ಪೊಲೀಸರು ಸುಶೀಲ್ಕುಮಾರ್ ಮತ್ತು ಆತನ ಸಹಚರನನ್ನ ಬಂಧಿಸಿದ್ದರು.