ತಾಜ್ ಮಹಲ್​ ರಹಸ್ಯ ಕೋಣೆಗಳ ತನಿಖೆಗೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ತಿರಸ್ಕರಿಸಿದ ಅಲಹಾಬಾದ್ ಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸುದೀರ್ಘ ಕಾಲದಿಂದ ಮುಚ್ಚಿರುವ ತಾಜ್ ಮಹಲ್​ನ 22 ಕೊಠಡಿಗಳನ್ನು ತೆಗೆಸುವ ಮೂಲಕ ತಾಜ್ ಮಹಲ್ ಇರುವ ಸ್ಥಳ ತೇಜೋ ಮಹಾಲಯ ಅಥವಾ ಶಿವಾ ದೇವಾಲಯವಾಗಿತ್ತೇ ಎಂಬುದರ ಕುರಿತಾಗಿ ಸಮೀಕ್ಷೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿದ್ದ ಪಿಐಎಲ್ ಅರ್ಜಿಯನ್ನು ಅಲಹಾಬಾದ್ ಕೋರ್ಟ್‍ಗೆ ಕೋರ್ಟ್ ವಜಾಗೊಳಿಸಿದೆ.
ಹಿಂದೂ ದೇವತೆಗಳ ವಿಗ್ರಹಗಳನ್ನು ಮುಚ್ಚಿದ ಬಾಗಿಲುಗಳ ಹಿಂದೆ ಇರಿಸಿ ಬೀಗ ಹಾಕಲಾಗಿದೆ. ತಾಜ್ ಮಹಲ್ ಶಿವ ದೇವಾಲಯವಾಗಿತ್ತು. ಇದೀಗ ಮುಚ್ಚಿರುವ 22 ಕೊಠಡಿಗಳಬಾಗಿಲುಗಳನ್ನು ತೆರೆದು ತನಿಖೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿ ಡಾ ರಜನೀಶ್ ಸಿಂಗ್ ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಅಲಹಾಬಾದ್‍ನ ದ್ವಿಸದಸ್ಯ ಪೀಠವು ಈ ಬಗೆಯ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ತೀರ್ಪಿತ್ತಿದೆ.
ಯಾವುದೇ ಹಕ್ಕುಗಳ ಉಲ್ಲಂಘನೆಯಾಗದ ಹೊರತು ಕೊಠಡಿಗಳನ್ನು ತೆರೆಯುವಂತೆ ಆದೇಶಿಸಲು ಸಾಧ್ಯವಿಲ್ಲ. ಐತಿಹಾಸಿಕ ಸಂಗತಿಗಳನ್ನು ಕೆದಕಲು ಹೋಗಬೇಡಿ. ಯಾವುದಾದರೂ ಹಕ್ಕುಗಳು ಉಲ್ಲಂಘನೆಯಾಗಿದ್ದರೆ ಮಾತ್ರವೇ ಪ್ರಶ್ನಿಸಬಹುದು. ತಾಜ್‌ ಮಹಲ್‌ ಕೋಣೆಗಳು ಬೀಗ ಹಾಕಿರುವುದರಲ್ಲಿ ನಿಮ್ಮ ಯಾವ ಹಕ್ಕುಗಳು ಉಲ್ಲಂಘನೆಯಾಗಿದೆ ಎಂದು ಕೋರ್ಟ್‌ ಅರ್ಜಿದಾರನ್ನು ಪ್ರಶ್ನಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!