ಅಣ್ಣಾಮಲೈಗೆ ಬಹಿರಂಗ ಬೆದರಿಕೆ- ತಮಿಳುನಾಡು ಪತ್ರಿಕೋದ್ಯಮ ಕುಸಿದಿರುವ ಪಾತಾಳವಿದು!

ಹೊಸದಿಗಂತ ಡಜಿಟಲ್‌ ಡೆಸ್ಕ್:‌
ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರ ವಿರುದ್ಧ ಪತ್ರಕರ್ತನೊಬ್ಬ ಬಹಿರಂಗವಾಗಿ ಬೆದರಿಕೆ ಹಾಕಿದ್ದಾನೆ.

ಚೆನ್ನೈನಲ್ಲಿ ಎರಡು ಪ್ರೆಸ್‌ ಕ್ಲಬ್‌ ಪ್ರತಿಭಟನೆಯ ವಿರುದ್ಧವಾಗಿ ಅಣ್ಣಾಮಲೈ ಅವರು ಟೀಕಿಸಿ ಟ್ವೀಟ್‌ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪತ್ರಕರ್ತನೊಬ್ಬ “ಬೇಕಾಬಿಟ್ಟಿಯಾಗಿ ಮಾತನಾಡಬೇಡಿ. ಇಲ್ಲದಿದ್ದಲ್ಲಿ ನಮ್ಮ ಪೆನ್ನುಗಳು ನಿಮ್ಮ ನಾಲಿಗೆಯನ್ನು ಚುಚ್ಚುತ್ತವೆ. ನೀವು ಹೇಳುವಂತೆ ನಾವೇನು ಮಾರಾಟವಾಗಿಲ್ಲ. ನೀವು ಕ್ಷಮೆ ಕೇಳುವವರೆಗೂ ನಾವು ನಿಮ್ಮನ್ನು ಹೊಡೆಯುತ್ತೇವೆ. ನಮ್ಮ ಪೆನ್ನು ಪೇಪರುಗಳು ನಿಮ್ಮ ಮೇಲೆ ದಾಳಿ ನಡೆಸುತ್ತವೆ. ನೀವು ಇಲ್ಲಿಂದ ಎಲ್ಲಿಗೇ ಹೋದರೂ ಕೂಡ ನಿಮ್ಮನ್ನು ಬಿಡುವುದಿಲ್ಲ. ನೀವು ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷದ ಮಂತ್ರಿಯಾಗಿದ್ದರೂ ಸಹ ನಾವು ಬಿಡುವುದಿಲ್ಲ. ನಿಮ್ಮ ಕಾರುಗಳನ್ನು ಸುತ್ತಿ ದಾಳಿ ನಡೆಸುತ್ತೇವೆ. ಕ್ಷಮೆ ಯಾಚಿಸುವವರೆಗೂ ಹೊಡೆಯುತ್ತಲೇ ಇರುತ್ತೇವೆ. ಕ್ಷಮೆ ಕೇಳದಿದ್ದರೆ ನಿಮ್ಮನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ನಿಮ್ಮನ್ನು ಹೊರಹಾಕುತ್ತೇವೆ” ಎನ್ನುವ ಮೂಲಕ ಪತ್ರಕರ್ತನೊಬ್ಬ ವಾಗ್ದಾಳಿ ನಡೆಸಿರುವ ವೀಡಿಯೋ ವೈರಲ್‌ ಆಗಿದೆ.

ಸಂವಿಧಾನದ ನಾಲ್ಕನೇ ಅಂಗವೆಂದು ಕರೆಸಿಕೊಳ್ಳುವ ಪತ್ರಿಕಾರಂಗದ ಸದಸ್ಯನಾಗಿ ಈ ರೀತಿ ಬೇಜವಾಬ್ದಾರಿಯುತವಾಗಿ ಮಾತನಾಡುವುದು ಪತ್ರಿಕರ್ತನಾದವನಿಗೆ ಶೋಭೆ ತರುತ್ತದಾ? ಎಂದು ತಮಿಳುನಾಡಿನ ಜನಸಾಮಾನ್ಯರು ಆಡಿಕೊಳ್ಳುವಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!