ಕಾರ್ಯಕರ್ತ ಮೇಲೆ ಕಲ್ಲು ತೂರಾಟ ನಡೆಸಿದ ತಮಿಳುನಾಡು ಸಚಿವ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾರ್ಯಕರ್ತ ತನಗೆ ಕುಳಿತುಕೊಳ್ಳಲು ಕುರ್ಚಿ ನೀಡಲು ಸಮಯ ತೆಗೆದುಕೊಂಡಿದ್ದಕ್ಕಾಗಿ ತಮಿಳುನಾಡಿನ ಹೈನುಗಾರಿಕೆ ಅಭಿವೃದ್ಧಿ ಸಚಿವ ಎಸ್ ಎಂ ನಾಸರ್ ಅವರು ಕಲ್ಲು ತೂರಾಟ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸ್ವಂತ ಪಕ್ಷದ ಕಾರ್ಯಕರ್ತನ ಮೇಲೆ ನಾಸರ್ ತೀವ್ರ ಅಸಮಾಧಾನಗೊಂಡು ಬೊಬ್ಬೆ ಹಾಕುತ್ತಾ ಬೈಯುತ್ತಾ, ಕೂಗಾಡಿ ಕಲ್ಲು ಎಸೆಯುತ್ತಾರೆ.

ಡಿಎಂಕೆಯ ‘ವೀರ ವನಕ್ಕಂ ನಾಲ್’ ಕಾರ್ಯಕ್ರಮದ ಭಾಗವಾಗಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನಾಳೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿರುವ ತಿರುವಳ್ಳೂರಿನ ಸ್ಥಳದಲ್ಲಿ ಸಚಿವರು ವ್ಯವಸ್ಥೆಗಳನ್ನು ನೋಡಲು ಬಂದಿದ್ದ ವೇಳೆ ಈ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!