ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ವಿರುದುನಗರದ ಶಿವಕಾಶಿಯಲ್ಲಿರುವ ಭದ್ರಕಾಳಿ ದೇವಾಲಯದ ರಾಜಗೋಪುರದಲ್ಲಿ ಬೆಂಕಿ ಕಾಣಿಸಿದೆ. ಗೋಪುರದ ನವೀಕರಣ ಕಾರ್ಯ ನಡೆಯುತ್ತಿದ್ದು, ಗೋಪುರವನ್ನು ಮರದ ಚೌಕಟ್ಟಿನಿಂದ ಮುಚ್ಚಲಾಗಿತ್ತು. ದೇಗುಲದ ಸಮೀಪದಲ್ಲಿ ಮದುವೆ ಮನೆಯ ಸಂಭ್ರಮದಲ್ಲಿ ಪಟಾಕಿಗಳನ್ನು ಸಿಡಿಸಿದ್ದು, ಇದರಿಂದಾಗಿ ಬೆಂಕಿ ಹತ್ತಿದೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ.
#WATCH | Tamil Nadu: Fire broke out in the Rajagopuram (temple tower) of Badrakali Amman Temple at Sivakasi in Virudhunagar. Fire extinguished using two fire tenders. pic.twitter.com/5UNSfGvK75
— ANI (@ANI) November 20, 2022
ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸಲಾಗಿದೆ. ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಶಿವಕಾಶಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.