ದಾರುಣ ಘಟನೆ: ಗಾಂಜಾ ಮತ್ತಿನಲ್ಲಿ ಹೆಂಡತಿ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗಾಂಜಾ ಮತ್ತಿನಲ್ಲಿ ಪತ್ನಿ ಮಕ್ಕಳನ್ನು ದಾರುಣವಾಗಿ ಕೊಲೆ ಮಾಡಿರುವ ಭೀಕರ ಘಟನೆ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ನಡೆದಿದೆ. ಓರ್ನತ್ತವಾಡಿ ಗ್ರಾಮದ ಪಳನಿ ಸಾಮಿ (45) ರೈತ. ಪತ್ನಿ ವಲ್ಲಿ, ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರನ ಮೇಲೆ ರಾತ್ರಿ ಪಳನಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಪತ್ನಿ ಹಾಗೂ ನಾಲ್ವರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 9 ವರ್ಷದ ಮಗಳು ಭೂಮಿಕಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅವರನ್ನು ಬರ್ಬರವಾಗಿ ಇರಿದು ಕೊಂದ ಪಳನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಾಂಜಾ ಕುಡಿದು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕೆಲವು ದಿನಗಳಿಂದ ಪಳನಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ಈ ಕಾರಣಕ್ಕೆ ಮನೆಯಲ್ಲಿ ಜಗಳ ಶುರುವಾಯಿತು. ಪಳನಿ ಜಮೀನು ಬಾಡಿಗೆಗೆ ಪಡೆದು ಕೃಷಿ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಆದರೆ, ನಿರೀಕ್ಷಿತ ಲಾಭ ಬಂದಿಲ್ಲ. ಕೊರೊನಾ ಆ ಕುಟುಂಬವನ್ನೂ ಛಿದ್ರಗೊಳಿಸಿತು. ಸಾಲ ಹೆಚ್ಚಾಗ ಹಣಕಾಸಿನ ತೊಂದರೆಗಳು ಎದುರಾದವು. ಒಂದು ಹೊತ್ತಿನ ಊಟಕ್ಕೂ ಕಷ್ಟವಾಗಿದ್ದಕ್ಕೆ ಪತಿ-ಪತ್ನಿಯ ನಡುವೆ ಜಗಳ ಶುರುವಾಗಿದೆ. ಇದರ ಜೊತೆಗೆ ಪಳನಿ ಗಾಂಜಾ ಚಟಕ್ಕೆ ಒಳಗಾಗಿ ಪತ್ನಿ ಮಕ್ಕಳಿಗೆ ನರಕ ತೋರಿಸಿದ್ದಾನೆ. ಇದೀಗ ಅದೇ ಗಾಂಜಾ ಕುಟುಂಬವನ್ನೇ ಕೊಂದಿರುವ ಘಟನೆ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿ ಮಕ್ಕಳನ್ನು ಸ್ಥಳೀಯರ ಆಸ್ಪತ್ರೆಗೆ ಕರೆದೊಯ್ದರು. ಆದರೆ ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದರು. ಮೃತರನ್ನು ಪತ್ನಿ ವಲ್ಲಿ, ಮಕ್ಕಳಾದ ತ್ರಿಶಾ (15), ಮೋನಿಶಾ (14), ಶಿವಶಕ್ತಿ (6) ಮತ್ತು ಧನುಷ್ (4) ಎಂದು ಗುರುತಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!