ಗುಂಡು ಹಾರಿಸಿಕೊಂಡು ಶಿಕ್ಷಕಿ ಸಾವು, ಸರ್ಕಾರದ ಜನಗಣತಿ ಒತ್ತಡಕ್ಕೆ ಬಲಿ?

ಹೊಸದಿಗಂತ ವರದಿ ಮಡಿಕೇರಿ: ಶಿಕ್ಷಕಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ನಡೆದಿದೆ.ಚೇರಂಬಾಣೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಅಂಜಪಂಡ ಯು. ರೋಹಿಣಿ (51) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ. ಸರಕಾರದ ಜನಗಣತಿ ಕಾರ್ಯದ ಒತ್ತಡ ಇವರ ಸಾವಿಗೆ ಕಾರಣವೇ ಎಂಬ ಶಂಕೆ ವ್ಯಕ್ತವಾಗಿದೆ. ರೋಹಿಣಿ ಕಳೆದ 25 ವರ್ಷಗಳಿಂದ ತಮ್ಮ ವೃತ್ತಿ ಜೀವನದಲ್ಲಿ ಸಾವಿರಾರು ಮಕ್ಕಳಿಗೆ ದಾರಿದೀಪವಾಗಿದ್ದರು.‌ ಅಲ್ಲದೆ ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರೆನ್ನಲಾಗಿದೆ. ಆದರೆ ಭಾನುವಾರ ತಮ್ಮ ಮನೆಯಲ್ಲೇ ಒಂಟಿ‌ ನಳಿಗೆ ಕೋವಿಯಿಂದ … Continue reading ಗುಂಡು ಹಾರಿಸಿಕೊಂಡು ಶಿಕ್ಷಕಿ ಸಾವು, ಸರ್ಕಾರದ ಜನಗಣತಿ ಒತ್ತಡಕ್ಕೆ ಬಲಿ?