ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಿದೆ. ಈ ಮೂಲಕ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.
ಬ್ಯಾಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಬೌಲಿಂಗ್ ನಲ್ಲೂ ಸಂಘಟಿತ ಪ್ರದರ್ಶನ ನೀಡಿತು. ಈ ಮೂಲಕ ಗೆದ್ದು ಸಂಭ್ರಮಿಸಿದೆ.
ಟೀಮ್ ಇಂಡಿಯಾ ನೀಡಿದ 229 ರನ್ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ದ ಪಾಥು ನಿಸ್ಸಾಂಕ, ಕುಸಲ್ ಮೆಂಡಿಸ್ ಉತ್ತಮ ಆರಂಭ ನೀಡಿದರು.
ಆದ್ರೆ ಅರ್ಶ್ದೀಪ್ ಸಿಂಗ್ ಬೌಲಿಂಗ್ ದಾಳಿಗೆ ಎಡವಿದ ನಿಸ್ಸಾಂಕ 15 ರನ್ ಗಳಿಸಿ ಔಟಾದರು. ಬಳಿಕ ಬಂದ ಆವಿಷ್ಕ ಫೆರ್ನಾಂಡೊ ಒಂದು ಗಳಿಸಿ ಪೆವಿಯನ್ ನತ್ತ ಸಾಗಿದರು. ಬಳಿಕ ಮೆಂಡಿಸ್ ಗೆ ಜೊತೆಯಾದ ಧನಂಜಯ ಡಿ ಸಿಲ್ ತಂಡದ ಮೊತ್ತವನ್ನು ಹೆಚ್ಚಿಸಲು ಪ್ರಯತ್ನ ಪಟ್ಟರು. ಆದ್ರೆ ಮೆಂಡಿಸ್ 23 ರನ್ ಗಳಿಸಿ ಔಟಾದರು.
ಚರಿತ್ ಅಸಲಂಕಾ ತಂಡಕ್ಕೆ ಅಲ್ಪ ಕಾಣಿಕೆ ನೀಡಿ 19 ರನ್ ಗಳಿಸಿ ಔಟಾದರು.
ಬಳಿಕ ಬಂದ ನಾಯಕ ದಸುನ್ ಶನಕ ಗೆಲುವಿಗಾಗಿ ಹೋರಾಟ ಮುಂದುವರಿಸಿದರು. ಆದ್ರೆ ಇತ್ತ ಕಡೆ ಧನಂಜಯ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ ನಾಯಕನಿಗೆ ಜೊತೆಯಾಗಲು ಎಡವಿದರು. ಈ ವೇಳೆ ನಾಯಕ ದಸುನ್ ಶನಕ 23 ಗಳಿಸಿ ಔಟಾದರು.
ಅಂತಿಮವಾಗಿ ಶ್ರೀಲಂಕಾ 16.4 ಓವರ್ ವೇಳೆ ತನ್ನ ಎಲ್ಲ ವಿಕೆಟ್ ಕಳೆದುಕೊಳ್ಳುವ ಮೂಲಕ 137 ರನ್ ಸಿಡಿಸಿ ಆಲೌಟ್ ಆಯಿತು. ಈ ಮೂಲಕ ಭಾರತ 91 ರನ್ಗಳ ಭರ್ಜರಿ ಗೆಲುವು ದಾಖಲಿಸಿತು.