ಗನ್ ಮಿಸ್ ಫೈರ್: ಬಾಯಿ ಮೂಲಕ ತಲೆಗೆ ಹೊಕ್ಕ ಗುಂಡು, ಕಾನ್‌ಸ್ಟೇಬಲ್ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೊಮರಂಭೀಮ್ ಜಿಲ್ಲೆಯ ಕೌತಾಳ ಪೊಲೀಸ್ ಠಾಣೆಯಲ್ಲಿ ಗನ್ ಮಿಸ್ ಫೈರ್ ಆಗಿದೆ. ಈ ಘಟನೆಯಲ್ಲಿ ಕಾನ್‌ಸ್ಟೆಬಲ್ ರಜಿನಿಕುಮಾರ್ ಬಾಯಿಯ ಮೂಲಕ ತೆರಳಿದ ಬುಲೆಟ್ ಅವರ ತಲೆಗೆ ತಗುಲಿದೆ. ಪರಿಣಾಮ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ರಕ್ತದ ಮಡುವಿನಲ್ಲಿದ್ದ ರಜಿನಿಕುಮಾರ್‌ ಅವರನ್ನು  ಠಾಣೆ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದರು. ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಕಾನ್‌ಸ್ಟೆಬಲ್ ರಜಿನಿ ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಮೃತಪಟ್ಟರು.

ಗನ್ ಮಿಸ್ ಫೈರ್ ಆಗಿದೆಯೇ? ಅಥವಾ ರಜಿನಿಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದಾರಾ? ಈ ಬಗ್ಗೆ ಹಲವು ಅನುಮಾನಗಳಿದ್ದು, ಈ ಬಗ್ಗೆ ತನಿಖೆ ನಡೆಸಲಾಗಿತ್ತು. ಈ ಕುರಿತು ಜಿಲ್ಲಾ ಎಸ್ಪಿ ಸುರೇಶ್ ಕುಮಾರ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದರು. ಕಾನ್ ಸ್ಟೇಬಲ್ ರಜಿನಿಕುಮಾರ್ ಆರೋಗ್ಯ ಸ್ಥಿತಿ ತುಂಬಾ ಕ್ಷೀಣಿಸಿದೆ ಎಂದು ವೈದ್ಯರು ತಿಳಿಸಿದ ಸ್ವಲ್ಪ ಹೊತ್ತಿಗೆ ರಜಿನಿ ಕುಮಾರ್ ಪ್ರಾಣಬಿಟ್ಟಿದ್ದಾರೆ. ಈ ಘಟನೆ ಹೇಗೆ ನಡೆದಿದೆ ಎಂದು ಸಿಬ್ಬಂದಿಯನ್ನು ವಿಚಾರಿಸಿ ವಿವರ ಪಡೆಯುತ್ತಿದ್ದಾರೆ. ರಜಿನಿಕುಮಾರ್ ಮೇ 2022 ರಿಂದ ಕೌತಾಳ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!