ಉಕ್ರೇನ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ, ಅಲ್ಲಿಗೆ ತೆರಳದಂತೆ ಭಾರತ ರಾಯಭಾರ ಕಚೇರಿ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್‌ನಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ಎದುರಾಗಿದ್ದು, ಭಾರತೀಯರು ಅಲ್ಲಿಗೆ ತೆರಳಬಾರದು ಎಂದು ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ.

ಮೂರು ತಿಂಗಳಿನಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ವಾತಾವರಣ ಇದೀಗ ಮತ್ತೆ ಉದ್ವಿಗ್ನಗೊಂಡಿದೆ. ಕ್ರಿಮಿಯಾ ಸೇತುವೆ ಧ್ವಂಸದ ಬಳಿಕ ಮತ್ತೆ ರಷ್ಯಾ ಸಿಡಿದೆದ್ದಿದ್ದು, ಉಕ್ರೇನ್ ಮೇಲೆ ದಾಳಿ ತೀವ್ರತೆ ಹೆಚ್ಚಿಸಿದೆ.

ಪರಿಸ್ಥಿತಿ ಯಾವ ಹಂತದಲ್ಲಾದರೂ ಕೈಮೀರಬಹುದು, ಅಗತ್ಯವಿಲ್ಲದಿದ್ದರೆ ಭಾರತೀಯ ಪ್ರಜೆಗಳು ಅಲ್ಲಿಗೆ ತೆರಳಬೇಡಿ ಎಂದು ಸೂಚನೆ ನೀಡಿದೆ.

ಉಕ್ರೇನ್ ಸರ್ಕಾರ ಹಾಗೂ ಸ್ಥಳೀಯ ಅಧಿಕಾರಿಗಳು ನೀಡಿರುವ ಸುರಕ್ಷತೆ ಮತ್ತು ಭದ್ರತಾ ಮಾರ್ಗಸೂಚಿಗಳನ್ನು ಅನುಸರಿಸಿ ಸುರಕ್ಷಿತವಾಗಿರಿ ಎಂದು ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!