ಹೊಸದಿಗಂತ ವರದಿ, ಹುಬ್ಬಳ್ಳಿ:
ನಗರದ ಹೊರವಲಯದ ತಾರಿಹಾಳ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಇಬ್ಬರು ತಡರಾತ್ರಿ ಹಾಗೂ ಒಬ್ಬರು ಬೆಳಿಗ್ಗೆ ಚಿಕಿತ್ಸೆ ಫಲಿಸದೆ ಮೃತ ಪಟ್ಟಿದ್ದಾರೆ.
ತಾರಿಹಾಳದ ನಿವಾಸಿ ವಿಜಯಲಕ್ಷ್ಮಿ ಯಚ್ಚನಗಾರ (34), ಗೌರಮ್ಮ ಹಿರೇಮಠ (38), ಲಿಂಗನಕೊಪ್ಪದ ನಿವಾಸಿ ಮಾಳೇಶ ಹದ್ದನ್ನವರ(27) ಎಂಬವರು ಮೃತಪಟ್ಟರು.
ಶನಿವಾರ ನಡೆದ ಅಗ್ನಿ ಅವಘಡದಲ್ಲಿ ಈ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ನಗರದ ಕಿಮ್ಸ್ ಆಸ್ಪತ್ರೆ ರವಾಣಿಸಲಾಗಿತ್ತು. ಮೃತದೇಹಗಳನ್ನು ಶವಗಾರಕ್ಕೆ ಕಳುಹಿಸಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ