ಯಾರ ಕಾಲದಲ್ಲಿ ಭಯೋತ್ಪಾದನೆ ಹೆಚ್ಚಾಗಿತ್ತು ಎಂಬುದು ಇಡೀ ದೇಶಕ್ಕೆ ಗೊತ್ತು: ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕ

ಹೊಸ ದಿಗಂತ ವರದಿ, ಬಾಗಲಕೋಟೆ:

ದೇಶದಲ್ಲಿ ಯಾರು ಭಯೋತ್ಪಾದಕರಿಗೆ ಬೆಂಬಲಿಸುತ್ತಾರೆ, ಭಯೋತ್ಪಾದಕರ ಸೃಷ್ಟಿಗೆ ಪ್ರೋತ್ಸಾಹ ಯಾರು ನೀಡುತ್ತಾರೆ, ಭಯೋತ್ಪಾದಕತೆಯನ್ನು ಬೇರು ಸಮೇತ ಕಿತ್ತು ಹಾಕಲು ಯಾರು ದಿಟ್ಟ ಕ್ರಮವನ್ನು ಕೈಗೊಂಡಿದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಬಿಜೆಪಿ ಸರ್ಕಾರ 7 ವರ್ಷದಲ್ಲಿ ಏನು ಮಾಡಿದೆ 70 ವರ್ಷದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಏನು ಮಾಡಿದೆ ಎಂಬುದನ್ನು ಜನ ಅರಿತಿದ್ದಾರೆ. ಪ್ರಚಾರಕ್ಕಾಗಿ ಇಲ್ಲಸಲ್ಲದ ಹೇಳಿಕೆಯನ್ನು ಕೊಡುವುದನ್ನು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಬಿಡಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಪತ್ರಿಕಾ ಪ್ರಕಟಣೆಯ ಮೂಲಕ ತಿರುಗೇಟು ನೀಡಿದ್ದಾರೆ.
ಉಗ್ರಗಾಮಿಗಳನ್ನು ಸಂತಾನೋತ್ಪತ್ತಿ ಮಾಡಿರುವುದು ಯಾರೆಂಬುದು ಹೇಳಬೇಕಿಲ್ಲ. ಉಗ್ರಗಾಮಿಗಳ ಸಂತಾನೋತ್ಪತ್ತಿಯನ್ನು ಕಟ್ ಮಾಡಲೆಂದೇ ದೇಶದಲ್ಲಿ ಮೋದಿ ಸರ್ಕಾರ ಬಂದಿದೆ. ಯಾರ ಕಾಲದಲ್ಲಿ ಭಯೋತ್ಪಾದಕರ ಅಟ್ಟಹಾಸವಿತ್ತು ಈಗ ಏನಾಗಿದೆ ಎಂಬುದರ ಅರಿವಿಲ್ಲದೇ ತಮ್ಮ ಬಾಯಿಗೆ ಬಂದಂತೆ ಮಾತನಾಡುವುದನ್ನು ಕಾಶಪ್ಪನವರ ಬಿಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದ ಅಭಿವೃದ್ಧಿ, ದೇಶವನ್ನು ಕಾಯಲು ಚಿಂತನೆ ಮಾಡುತ್ತದೆ ಭಯೋತ್ಪಾದನೆಯನ್ನು ಸೃಷ್ಟಿ ಮಾಡಲು ಅಲ್ಲ. ಆರ್ ಎಸ್ಎಸ್ ಯಾವತ್ತೂ ದೇಶ ಹಾಗೂ ನಮ್ಮ ಸಂಸ್ಕೃತಿಯನ್ನು ಕಾಪಾಡಲು ಕೆಲಸ ಮಾಡುತ್ತದೆ ವಿನ: ರಾಜಕಾರಣ ಮಾಡಲು ಅಲ್ಲ ಎಂಬುದನ್ನು ಕಾಶಪ್ಪನವರ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ವಿಜಯಾನಂದ ಕಾಶಪ್ಪನವರ ತಮ್ಮ ನಾಯಕರನ್ನು ಮೆಚ್ಚಿಸಲು ಆರ ಎಸ್ ಎಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಮಾತನಾಡುವುದನ್ನು ಬಿಡಬೇಕು. ಈ ರೀತಿ ನಾಲಿಗೆಯನ್ನು ಹರಿಬಿಟ್ಟರೆ ಜನ ಪಾಠ ಕಲಿಸುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ರಾಜು ನಾಯ್ಕರ ಹೇಳಿದ್ದಾರೆ.
ಯಾರು ಆಲದ ಮರ, ಯಾರು ಬೊಗಳೋ ನಾಯಿ ಎಂಬುದನ್ನು ನಿಮ್ಮ ಕ್ಷೇತ್ರದ ಜನರಿಗೆ ಗೊತ್ತಿದೆ. ಈಗಾಗಲೇ ಈ ರೀತಿ ಅಬ್ಬರದ ಇಲ್ಲಸಲ್ಲದ ಹೇಳಿಕೆಯನ್ನು , ಆರೋಪ ಮಾಡುವುದನ್ನು ಮಾಡಿದ್ದರಿಂದಲೇ ನಿಮ್ಮ ಕ್ಷೇತ್ರದ ಜನ ನಿಮಗೆ ಪಾಠ ಕಲಿಸಿದ್ದಾರೆಂಬುದನ್ನು ಅರಿತುಕೊಳ್ಳಬೇಕು. ಚುನಾವಣೆ ಬಂದಾಗ ಸುಖಾಸುಮ್ಮನೆ ಆರ ಎಸ್ ಎಸ್, ಹಿಂದೂ ಸಂಘಟನೆಗಳ ಬಗ್ಗೆ ತಪ್ಪು ಸಂದೇಶವನ್ನು ಜನರಲ್ಲಿ ತುಂಬಿ ರಾಜಕಾರಣ ಮಾಡುಬಿಟ್ಟು ತಾಕತ್ತ ಇದ್ದರೆ ಬಿಜೆಪಿಯಲ್ಲಿ ಸೆಣಸಾಡಿ ಎಂದು ಕಾಶಪ್ಪನವರಿಗೆ ನಾಯ್ಕರ ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!