ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ವಾಯುಸೇನೆ ಸೇರಲು ಸಜ್ಜಾಗುತ್ತಿರುವ ದೇಸೀ ನಿರ್ಮಿತ ಯುದ್ಧವಿಮಾನವನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಸ್ವತಃ ಚಲಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಅವರು ಶನಿವಾರ ಕರ್ನಾಟಕದ ಬೆಂಗಳೂರಿನಲ್ಲಿ ಭಾರತ ನಿರ್ಮಿತ ಯುದ್ಧ ವಿಮಾನವನ್ನು ಹಾರಿಸುವ ಮೂಲಕ ಅದರ ಕಾರ್ಯದಕ್ಷತೆಯನ್ನು ಪರೀಕ್ಷಿಸಿದ್ದಾರೆ. ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ನಿರ್ಮಾಣ ಮಾಡಿರುವ ತೇಜಸ್ ಫೈಟರ್ ಜೆಟ್ ಅನ್ನು ವಾಯಸೇನಾ ಮುಖ್ಯಸ್ಥರುಯ ಚಲಾವಣೆ ಮಾಡಿದ್ದಾರೆ. ಇದು ಭಾರತ ನಿರ್ಮಿತ ಲಘು ಯುದ್ಧ ವಿಮಾನವಾಗಿದ್ದು MiG-21 ರ ಸ್ಥಾನಕ್ಕೆ ಪರ್ಯಾಐವಾಘಿ ಬಳಕೆಯಾಗಲಿದೆ ಎನ್ನಲಾಗಿದೆ.
ಅವರು ವಾಯುಪಡೆಗೆ ಸೇರ್ಪಡೆಗೊಳ್ಳಲಿರುವ ಭಾರತ ನಿರ್ಮಿತ ಆತ್ಮನಿರ್ಭರ ಯುದ್ಧ ವಿಮಾನವನ್ನು ಪರಿಶೀಲಿಸಲು ಎರಡು ದಿನಗಳ ಬೆಂಗಳೂರಿಗೆ ಭೇಟಿ ನೀಡಿದ್ದರು. ಲಘು ಯುದ್ಧ ವಿಮಾನ Mk 1 ‘ತೇಜಸ್’, ಲಘು ಯುದ್ಧ ಹೆಲಿಕಾಪ್ಟರ್ ಮತ್ತು HTT-40 ಅನ್ನು ಹಾರಿಸಿ ಪರಿಶೀಲಿಸಿದರು ಎಂದು ವಾಯುಸೇನೆ ಟ್ವೀಟ್ ಮಾಡಿದೆ.