ಹೊಸದಿಗಂತ ವರದಿ, ಉಡುಪಿ:
ಉಡುಪಿಯಿಂದ ಪಡುಬಿದ್ರೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತೆರಳುತ್ತಿದ್ದ ಸ್ವಿಫ್ಟ್ ಕಾರು ಕಟಪಾಡಿ ಕಲ್ಲಾಪು ಸಮೀಪ ಹೆದ್ದಾರಿಯ ಗುಂಡಿಯನ್ನು ತಪ್ಪಿಸಲು ಹೋಗಿ ಹೆದ್ದಾರಿ ಬದಿಯ ಗದ್ದೆಗೆ ಬಿದ್ದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.
ಕಾಪುವಿನ ಪತ್ರಿಕಾ ವರದಿಗಾರಾದ ಹಮೀದ್ ಎಂಬವರಿಗೆ ಸೇರಿದ ಕಾರು ಇದಾಗಿದ್ದು, ಘಟನೆ ನಡೆದಾಗ ಕಾರಿನಲ್ಲಿ ಹಮೀದ್ ಒಬ್ಬರೇ ಇದ್ದರು. ಕಾರು ಗದ್ದೆಗೆ ಬಿದ್ದಾಗ ಕಾರಿನ 2 ಏರ್ ಬ್ಯಾಗ್ ಗಳು ಬಿಚ್ಚಿಕೊಂಡಿದ್ದು, ಅವರಿಗೆ ಯಾವುದೇ ಗಾಯಗಳಾಗಿಲ್ಲ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ರೇನ್ ನ ಮೂಲಕ ಕಾರನ್ನು ಮೇಲಕ್ಕೆತ್ತಲಾಗಿದೆ.