ತಾಯಿ ಜೊತೆ ಕಂಡ ಪರಪುರುಷನನ್ನು ಬರ್ಬರವಾಗಿ ಕೊಂದ ಮಕ್ಕಳು

ದಿಗಂತ ವರದಿ ವಿಜಯಪುರ:

ತಾಯಿ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಮೂವರು ಮಕ್ಕಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಚಡಚಣದಲ್ಲಿ ನಡೆದಿದೆ.

ಇಲ್ಲಿನ ತುಕಾರಾಮ ಚವ್ಹಾಣ (60) ಕೊಲೆಯಾದ ವ್ಯಕ್ತಿ. ತುಕಾರಾಮ ಚವ್ಹಾಣ ಈತ ಇಲ್ಲಿನ ತಂಗೆವ್ವ (45) ಎಂಬ ಮಹಿಳೆಯೊಂದಿಗೆ ಕಳೆದ ಹತ್ತು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದ. ಈತ ನಿನ್ನೆ ತಂಗೆವ್ವ ಜೊತೆ ಮನೆ ಹಿಂದೆ ಮಲಗಿಕೊಂಡಿದ್ದ ವೇಳೆ ಸಿಕ್ಕಿಬಿದ್ದಿದ್ದು, ತಂಗೆವ್ವಳ ಮಕ್ಕಳಾದ ಸದಾಶಿವ ಬಂಗಾರತಳಿ, ಚಿಕ್ಕು ಬಂಗಾರತಳಿ, ಸಿದ್ದು ಬಂಗಾರತಳಿ ತುಕಾರಾಮನನ್ನು ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಮೂರು ಆರೋಪಿಗಳನ್ನು ಮಹಾರಾಷ್ಟ್ರದ ಕೊಲ್ಲಾಪುರ ಬಳಿ ಪೊಲೀಸರು ಬಂಧಿಸಿದ್ದಾರೆ. ‌ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!