ಬೊಮ್ಮಾಯಿ ಸೋಲಿಸಲು ಪ್ಲಾನ್ ಮಾಡಿದ್ದೇ ಮಾಡಿದ್ದು, ನಾನು ಅವಕ್ಕೆಲ್ಲ ತಲೆ ಕೆಡಿಸಿಕೊಂಡಿಲ್ಲ ಎಂದ ಸಿಎಂ!

ಹೊಸದಿಗಂತ ವರದಿ, ಹಾವೇರಿ:

ಬೆಂಗಳೂರು, ದೆಹಲಿಯಲ್ಲಿ ಕುಳಿತು ಬೊಮ್ಮಾಯಿ ಹೇಗೆ ಸೋಲಿಸಬೇಕು ಅಂತ ಪ್ಲ್ಯಾನ್ ಮಾಡಿದ್ದೇ ಮಾಡಿದ್ದು, ನಾನು ಅವಕ್ಕೆಲ್ಲ ತಲೆ ಕೆಡಿಸಿಕೊಂಡಿಲ್ಲ. ನನಗೆ ವಿಶ್ವಾಸ ಇರೋದು ತಾಯಂದಿರ ಮೇಲೆ, ಜನತೆ ಮೇಲೆ, ಯುವಕ ಮಿತ್ರರ ಮೇಲೆ, ರೈತರ ಮೇಲೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಶಿಗ್ಗಾವ್ ಪಟ್ಟಣದಲ್ಲಿ ವಿವಿಧ ಪಕ್ಷಗಳಿಂದ ಪಕ್ಷಕ್ಕೆ ಆಗಮಿಸಿದ್ದ ಮುಖಂಡರು ಮತ್ತು ಜನತೆಯನ್ನು ಪಕ್ಷದ ಶಾಲ ಹಾಕಿ ಸ್ವಾಗತಿಸಿ ಮಾತನಾಡಿ, ಶಿಗ್ಗಾವಿ ಬಂಧುಗಳು ಒಳ್ಳೆಯದನ್ನು ಗುರುತಿಸ್ತಾರೆ, ಬೆಂಬಲಿಸ್ತಾರೆ ಯಾರೂ ಅವರಿಗೆ ಕಲಿಸಬೇಕಾಗಿಲ್ಲ, ಎಂಥ ಅಪ್ರಭುದ್ಧರಾಗಿದ್ದರೂ ಸಹ ಅವರ ಆತ್ಮ ಸಾಕ್ಷಿಯಿಂದ ನಡೆದುಕೊಳ್ಳುವ ಜನರು ಬೆಂಬಲಿಸ್ತಾರೆ.
ಕೆಲ ಪಕ್ಷದ ನಾಯಕರು ಒಂದು ಕ್ಷೇತ್ರವಲ್ಲದೇ ಬೇರೆ ಬೇರೆ ಕ್ಷೇತ್ರಗಳ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ. ಒಂದು ಕ್ಷೇತ್ರದ ಜನತೆಯ ವಿಶ್ವಾಸವನ್ನು ಗಳಿಸದವರು ಇನ್ನು ರಾಜ್ಯದ ಜನತೆಯ ವಿಶ್ವಾಸವನ್ನು ಗಳಿಸುವುದಕ್ಕೆ ಸಾಧ್ಯವೇ ಎಂದು ಬೇರೆ ಪಕ್ಷದ ನಾಯಕರೆನಿಸಿಕೊಂಡವರು ಒಂದoಕ್ಕಿoತ ಹೆಚಚು ಕ್ಷೇತ್ರಗಳಿಂದ ಸ್ವರ್ಧಿಸುವುದಕ್ಕೆ ಮುಂದಾಗುತ್ತಿರುವುದಕ್ಕೆ ಯಾರ ಹೆಸರನ್ನು ಪ್ರಸ್ತಾಪಿಸದೇ ಅವರಿಗೆಲ್ಲ ಚಾಟಿ ಬೀಸಿದರು ಸಿಎಂ.
ಈ ಹಿಂದಿನ ಎರಡು ಚುನಾವಣೆಗಳಲ್ಲಿಯೂ ನನ್ನ ವಿರುದ್ದ ಬಹಳ ದೊಡ್ಡ ಅಪಪ್ರಚಾರ ಆಯ್ತು. ಅಂದು ಪ್ರಮುಖ ಪತ್ರಿಕೆಯಲ್ಲಿ ಬೊಮ್ಮಾಯಿ ಗೆಲ್ಲೋದು ಸಾಧ್ಯವಿಲ್ಲ ಎಂದು ಬರೆದಿದ್ದರು, ರಿಸಲ್ಟ್ ಆದ ದಿನ ವಿಜಯೋತ್ಸವ ನೋಡು ಎಂದು ನಾನು ಆ ಪತ್ರಕರ್ತನಿಗೆ ಹೇಳಿದ್ದೆ. ನನನ್ನ ವಿಜಯೋತ್ಸವದ ದಿನ ನಾನು ಫೋನ್ ಮಾಡಿ ವಿಚಾರಿಸಿದೆ ಆಗ ನನಗೆ ತಿಳಿದ ತಪ್ಪು ಮಾಹಿತಿಯಿಂದ ಹೀಗಾಯಿತು ಎಂದು ತಿಳಿಸಿದ್ದರು ಎಂದು ತಪ್ಪು ವರದಿಗಳಿಂದ ಯಾರೂ ತೆಲೆ ಕೆಡಿಸಿಕೊಳ್ಳಬೇಡಿ ಎಂದು ಮಾರ್ಮಿಕವಾಗಿ ತಿಳಿಸಿದರು.
ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು, ವಿಶ್ವಾಸದಿಂದ ಇಡೀ ಮನುಕುಲವೇ ನಮ್ಮದಾಗಬಹುದು ಎನ್ನುವುದು ಶಿಗ್ಗಾವ್ ಸವಣೂರ ಕ್ಷೇತ್ರದಲ್ಲಿ ಪಕ್ಷಕ್ಕೆ ಜನತೆ, ಮುಖಂಡರು ಸೇರುತ್ತಿರುವುದನ್ನು ಗಮನಿಸಿದರೆ ನಿಜವೆನಿಸುತ್ತದೆ. ಇಡೀ ಕರ್ನಾಟಕದ ಅಭಿವೃದ್ಧಿಗೆ ರಾಜ್ಯವನ್ನು ಸುತ್ತಿದ್ದೇನೆ. ಅದರೊಂದಿಗೆ ಈ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿದ್ದೇನೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!