ಹೊಸದಿಗಂತ ಡಿಜಿಟಲ್ ಡೆಸ್ಕ್:
ದೈವನರ್ತನದ ವೇಳೆಯೇ ದೈವ ನರ್ತಕರೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗದಲ್ಲಿ ದೈವನರ್ತಕ ಕಾಂತು ಅವರು ನಿಧನರಾಗಿದ್ದಾರೆ. ಇಡ್ಯಡ್ಕ ಎಂಬಲ್ಲಿ ಶಿರಾಡಿ ದೈವದ ನರ್ತನಕ್ಕೆ ಮೊದಲು ಉಳ್ಳಾಕುಲು, ನಾಗಬ್ರಹ್ಮ ದೈವದ ನರ್ತನ ಸೇವೆ ನಡೆಯುತ್ತಿತ್ತು.
ಶಿರಾಡಿ ದೈವದ ಕೋಲ ನಡೆಯುತ್ತಿದ್ದ ವೇಳೆ ದೈವ ನರ್ತಕ ಕಾಂತು ಏಕಾಏಕಿ ಕುಸಿದುಬಿದ್ದು ಮೃತಪಟ್ಟಿದ್ದಾರೆ. ನೃತ್ಯ ಮಾಡುತ್ತಲೇ ಕುಸಿದುಬಿಟ್ಟ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಮಂಗಳೂರಿನಲ್ಲಿ ದೈವನರ್ತನ ಮಾಡುವಾಗ ದೈವ ನರ್ತಕ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕಡಬ ತಾಲೂಕಿನ ಎಡಮಂಗಲ ನಿವಾಸಿ 60 ವರ್ಷದ ಕಾಂತು ಮೃತಪಟ್ಟ ದೈವ ನರ್ತಕ. pic.twitter.com/RaOpQXuB9f
— Bhima (@Bhima895143) March 30, 2023