ಹೊಸದಿಗಂತ ವರದಿ,ಶಿವಮೊಗ್ಗ:
ಯಾರು ಹಿಜಾಬ್ ವಿವಾದಕ್ಕೆ ಪ್ರಚೋದನೆ ನೀಡಿದ್ದರೋ ಅವರು ತೀರ್ಪನ್ನು ಗಮನಿಸಿ, ಎಲ್ಲ ವಿದ್ಯಾರ್ಥಿನಿಯರೂ ಶಾಲಾ-ಕಾಲೇಜಿಗೆ ತೆರಳುವಂತೆ ಬುದ್ಧಿವಾದ ಹೇಳಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ತೀರ್ಮಾನವನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ತೀರ್ಪನ್ನು ತುಂಬಾ ಸಂತೋಷದಿಂದ ಸ್ವಾಗತಿಸುತ್ತೇನೆ. ರಾಜ್ಯದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ಉಂಟಾಗಿದ್ದ ಗೊಂದಲ ದೂರಾಗಿದೆ ಎಂದರು.
ವಿವಾದ ಹುಟ್ಟು ಹಾಕಿ ಕೆಲವರು ಮಕ್ಕಳ ಶಿಕ್ಷಣವನ್ನು ಸಾಕಷ್ಟು ದಿನ ಹಾಳುಗೆಡವಿದ್ದಾರೆ. ಹೈಕೋರ್ಟ್ ಆದೇಶದ ಬಳಿಕವಾದರೂ ಮಕ್ಕಳ ಶಿಕ್ಷಣಕ್ಕೆ ಹಿನ್ನಡೆಯಾಗಬಾರದು. ಕೋರ್ಟ್ ತೀರ್ಮಾನಕ್ಕೆ ಬದ್ಧವಾಗಿರಬೇಕಾದ್ದು ಪ್ರಜಾಪ್ರಭುತ್ವದ ವ್ಯವಸ್ಥೆಯ ಮುಖ್ಯ ಭಾಗ ಎಂದರು.