ಹೊಸದಿಗಂತ ವರದಿ, ಹುಬ್ಬಳ್ಳಿ
ಶ್ರಕ್ರ ಫಿಲಮ್ಸ್ ರವರ ‘ವ್ಯೋಮಕಾಯ ಸಿದ್ಧ ಶ್ರೀ ಅಲ್ಲಮ್ಮಪ್ರಭು’ ಚಿತ್ರ ಮೇ ತಿಂಗಳಲ್ಲಿ ಬಿಡುಗಡೆಗೊಳ್ಳಲ್ಲಿದೆ. 12 ನೇ ಶತಮಾನದಲ್ಲಿ ಅಲ್ಲಮ್ಮಪ್ರಭುದೇವರ ಜೀವನ ಸಾಧನೆಯನ್ನು ಸಿನಿಮಾದ ಮೂಲಕ ತೊರಿಸಲಾಗುತ್ತಿದೆ ಎಂದು ಚಿತ್ರದ ನಿರ್ಮಾಪಕ ಮಾಧವಾನಂದ ಶೇಗುಣಸಿ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಗಾದಿ ದಿನದಂದು ಚಿತ್ರದ ಎರಡು ಹಾಡುಗಳು ಬಿಡುಗಡೆ ಮಾಡಲಾಗಿದೆ. ರಾಮನವಮಿ ದಿನದಂದು 2 ಹಾಡುಗಳನ್ನು ಬಿಡುಗಡೆ ಮಾಡಲಿದ್ದೇವೆ. ಅಕ್ಕಮಹಾದೇವಿಯ ಜಯಂತಿಯೆಂದು ಎರಡು ಹಾಡುಗಳು ಬಿಡುಗಡೆಯಾಗಲಿವೆ ಎಂದರು.
ಈಗಾಗಲೇ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಚಿತ್ರಬಿಡುಗಡೆಗೆ ಸೆನ್ಸಾರ್ ಮಂಡಳಿಯ ಅನುಮತಿ ದೊರೆತಿದೆ. ಸಿನಿಮಾದಲ್ಲಿ ಅಲ್ಲಮ ಪ್ರಭುಗಳ ಬಾಲ್ಯದಿಂದ ಹಿಡಿದು ಜೀವಿತದ ಕೊನೆಯವರೆಗೆ ತೋರಿಸಲಾಗಿದೆ. ಬೆಂಗಳೂರು, ಬನವಾಸಿ, ತೆರದಾಳ ಸೇರಿದಂತೆ ಹಲವೆಡೆ ಚಿತ್ರೀಕರಣ ಮಾಡಲಾಗಿದೆ ಎಂದರು.
ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ನಿರ್ಮಾಪಕ ಮಹಾವೀರ ಪ್ರಭು, ನಿರ್ದೇಶಕ ಶರಣ್ ಗದ್ವಾಲ್, ಸಿನಿಮಾ ನಾಯಕ ಸಚಿನ ಸುವರ್ಣ ಈ ವೇಳೆ ಉಪಸ್ಥಿತರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ