ದಿನಭವಿಷ್ಯ | ಒಳ್ಳೆಯ ಅವಕಾಶ ದೊರೆತರೆ ಅದನ್ನು ಸ್ವೀಕರಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಒಳ್ಳೆಯ ಅವಕಾಶ ದೊರೆತರೆ ಅದನ್ನು ಸ್ವೀಕರಿಸಿ. ಆ ಕುರಿತು ಮೀನಮೇಷ ಎಣಿಸುತ್ತಾ ಕೂರದಿರಿ. ಕ್ಷಿಪ್ರ ನಿರ್ಧಾರ ತಾಳುವುದು ಅವಶ್ಯವಾಗಿದೆ.

ವೃಷಭ
ಭಾವನಾತ್ಮಕವಾಗಿ ಹೆಚ್ಚು ನಿರಾಳತೆ, ಸಂತೋಷ. ಹಾಗಾಗಿ ನಿಮ್ಮ ಆರೋಗ್ಯಕ್ಕೂ ಹಿತಕರ. ಸಣ್ಣ ವಿಷಯಗಳಿಗೆ  ತಲೆಕೆಡಿಸಿಕೊಳ್ಳದಿರಿ. ಆರ್ಥಿಕ ಸ್ಥಿತಿ ಉತ್ತಮ.

ಮಿಥುನ
ಅವಶ್ಯಕ್ಕಿಂತ ಹೆಚ್ಚು ಹಣ ಖರ್ಚಾದರೆ ಅದರ ಕುರಿತು ಕೊರಗುತ್ತಾ ಕೂರದಿರಿ. ಮಿತವ್ಯಯದ ದಾರಿ ಹುಡುಕಿ. ವ್ಯವಹಾರ ಪ್ರಾಮಾಣಿಕವಾಗಿರಲಿ.

ಕಟಕ
ನಿಮಗೆ ಸದಾ ಬೆಂಬಲ ನೀಡುತ್ತಾ ಬಂದವರನ್ನು ಮರೆಯಬೇಡಿ. ಅವರ ಅವಶ್ಯಕ್ಕೂ ಸ್ಪಂದಿಸಿರಿ. ನಿಮ್ಮ ನಡೆನುಡಿ ಸಂಬಂಧ ಕೆಡಿಸದಂತೆ ನೋಡಿಕೊಳ್ಳಿ.

ಸಿಂಹ
ಸಂಗಾತಿ ಜತೆಗೆ ಸಂಘರ್ಷ ನಡೆದೀತು. ಭಾವನೆಯನ್ನು ನಿಯಂತ್ರಿಸುವುದು ಅವಶ್ಯ. ಸಣ್ಣ ವಿಷಯ ಅತಿರೇಕಕ್ಕೆ ಕೊಂಡೊಯ್ಯದಿರಿ.

ಕನ್ಯಾ
ಮಾತಿಗೆ ಮಾತು ಬೆರೆಸುವುದು ಸಂಘರ್ಷಕ್ಕೆ ದಾರಿ. ಇದನ್ನು ನೀವು ಅರಿಯಬೇಕು. ಹೊಂದಾಣಿಕೆ, ಸಂಧಾನಕ್ಕೆ ಆದ್ಯತೆ ಕೊಡುವುದು ಒಳ್ಳೆಯದು.

ತುಲಾ
ಮಾನಸಿಕವಾಗಿ ಹೆಚ್ಚು ದೃಢತೆ ಪ್ರದರ್ಶಿಸುವಿರಿ. ಹಾಗಾಗಿ ಭಾವನಾತ್ಮಕ ಏರುಪೇರು ಇಂದು ಬಾಧಿಸದು. ಖಾಸಗಿ ಸಮಸ್ಯೆ ಪರಿಹಾರ ಕಾಣುವುದು.

ವೃಶ್ಚಿಕ
ಆಪ್ತರೊಂದಿಗೆ ಇಂದು ಹೆಚ್ಚು ಸಮಯ ಕಳೆಯುವ ಅವಕಾಶ ಒದಗಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಕುಟುಂಬಸ್ಥರ ಸಹಕಾರ.

ಧನು
ಕುಟುಂಬದಲ್ಲಿ ಭಿನ್ನಮತವೆ? ಹಾಗಿದ್ದರೆ ಅವರೊಂದಿಗೆ ಹೆಚ್ಚು ಸಮಯ ಕಳೆಯಿರಿ. ದೂರ ಹೋಗಬೇಡಿ. ಸಮಸ್ಯೆಗೆ ಮಾತುಕತೆ ಪರಿಹಾರ.

ಮಕರ
ಮಾನಸಿಕ ಶಾಂತಿ ಆರೋಗ್ಯಕ್ಕೆ ಮುಖ್ಯ. ಕೆಲವು ಸಣ್ಣ ವಿಷಯಗಳಿಗೆ ಚಿಂತೆ ಮಾಡುವುದು ಬಿಡಿ. ನೀವಾಗಿ ಸಮಸ್ಯೆ ಆಹ್ವಾನಿಸಿಕೊಳ್ಳದಿರಿ.

ಕುಂಭ
ಕೌಟುಂಬಿಕ ಶಾಂತಿ ಹಾಳುಗೆಡಹುವ ಹವ್ಯಾಸವನ್ನು ತ್ಯಜಿಸಿರಿ. ನೀವೂ ಸ್ವಲ್ಪ ಮಟ್ಟಿನ ತ್ಯಾಗ ಮಾಡಲು ಕಲಿಯಬೇಕು. ಆರ್ಥಿಕ ಸ್ಥಿತಿ ಉತ್ತಮ.

ಮೀನ
ಹಣಕಾಸು ಸ್ಥಿತಿ ಡೋಲಾಯಮಾನ. ಆಹಾರ ಕ್ರಮದಲ್ಲಿ ತುಸು ಬದಲಾವಣೆ ಮಾಡಿಕೊಳ್ಳಿ. ಅದುವೇ ಆರೋಗ್ಯಕ್ಕೆ ರಹದಾರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!