ಹೊಸದಿಗಂತ ವರದಿ,ಕಲಬುರಗಿ:
ನಮ್ಮ ಜಾತಿ-ಧರ್ಮದ ವಿಷಯಕ್ಕೆ ಕುತ್ತು ಬಂದಾಗ ನಾನು ಸುಮ್ಮನೆ ಇರುವುದಿಲ್ಲ. ನಮ್ಮ ಧರ್ಮದ ಉಡುಪಾಗಿರುವ ಹಿಜಾಬ್ ಧರಿಸುವುದಕ್ಕೆ ಅಡ್ಡಿ ಪಡಿಸಿದರೆ ಅಂತವರನ್ನು ತುಕ್ಡೆ ತುಕ್ಡೆ ಮಾಡಿ ಬಿಸಾಕುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಅಕ್ರಂ ಖಾನ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯ ಸೇಡಂ ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಜಾಬ್ ಹಾಕಬೇಡಿ ಎಂದು ಹೇಳುವುದಕ್ಕೆ ಅದೆನೂ ನಿಮ್ಮಪ್ಪನ ಸ್ವತ್ತೆ ಎಂದು ಕೆಂಡಾಮಂಡಲವಾಗಿ ಪ್ರಶ್ನಿಸಿದ್ದಾರೆ. ನಮ್ಮ ಜಾತಿ-ಧರ್ಮದ ವಿಷಯಕ್ಕೆ ಬಂದರೆ ನಾವು ಸುಮ್ಮನೆ ಕೂಡಲ್ಲ. ಎಲ್ಲರಿಗೂ ಅವರವರ ಜಾತಿ-ಧರ್ಮ ಶ್ರೇಷ್ಟವಾಗಿರುತ್ತದೆ ಎಂದರು.
ಹಿಜಾಬ್ ಬೇಡ್. ಹಿಜಾಬ್ ಬೇಕೆನ್ನುವವರು ಪಾಕಿಸ್ತಾನಕ್ಕೆ-ತಾಲಿಬಾನ್,ಗೆ ಹೋಗಲಿ ಎಂದು ಹೇಳುವುದಕ್ಕೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಯಾರು ? ಮಂದೆವಾಲ ಶ್ರೀ ಯಾರು ? ಎಂದು ಪ್ರಶ್ನಿಸಿದರು. ನಿನಗೆ ಸೆಕ್ಯೂಲರಿಸಂ ಬೇಕಾದರೆ ನೀನು ಬೇಕಾಗಿದ್ದರೆ, ನೀನು ಬಿಜೆಪಿಯಲ್ಲೆ ಇರಬೇಕಿತ್ತು, ಜೆಡಿಎಸ್ ಪಕ್ಷಕ್ಕೆ ಯಾಕೆ ಬಂದೆ ಎಂದರು.
ಅದೇ ರೀತಿ ಮತ್ತೆ ಜೆಡಿಎಸ್ ನಿಂದ ಬಿಜೆಪಿ ಪಕ್ಷಕ್ಕೆ ಯಾಕೆ ಹೋಗಿದ್ದು ಎಂದು ಯತ್ನಾಳ ವಿರುದ್ದ ಹರಿಹಾಯ್ದರು. ನೀನು ನಾಯಿ ಥರದಲ್ಲಿ ಬೊಗಳುತ್ತಾ ಇರುತ್ತಿಯಾ ನಿನಗೆ ಯಾರು ಕೇಳುವುದಿಲ್ಲ ಎಂದು ಏಕ ವಚನದಲ್ಲೆ ಹರಿಹಾಯ್ದರು.