ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜ್ಯವ್ಯಾಪಿ ಚರ್ಚೆಗಳು ನಡೆಯುತ್ತಿದ್ದು ನೂತನವಾಗಿ ರೋಹಿತ್ ಚಕ್ರತೀರ್ಥ ಅವರ ನೇತೃತ್ವದ ಸಮಿತಿಯು ಪರಿಷ್ಕರಿಸಿದ ಪಠ್ಯ ಪುಸ್ತಕಗಳ ವಿರುದ್ಧವಾಗಿ ಎಡಪಂಥೀಯರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ಧಾರೆ. ಕುವೆಂಪುರವರಿಗೆ ಅವಮಾನ, ಹೆಡ್ಗೇವಾರ್ ವಿಷಯ ಸೇರ್ಪಡೆ, ಟಿಪ್ಪುವನ್ನು ಕೈಬಿಡಲಾಗಿದೆ ಎಂದೆಲ್ಲ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ.
ಹೊಸ ಪರಿಷ್ಕರಣೆಯಲ್ಲೇನಿದೆ, ಯಾವ್ಯಾವ ವಿಷಯಗಳನ್ನು ಸೇರಿಸಲಾಗಿದೆ ಏನೆಲ್ಲ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದರ ಕುರಿತು ಗಮನ ಹರಿಸದೇ ಕೇವಲ ವಿರೋಧಿಸಬೇಕು ಎಂಬಕಾರಣಕ್ಕೆ ಕೇಸರೀಕರಣ, ಬ್ರಾಹ್ಮಣ ಪಠ್ಯ ಎಂದೆಲ್ಲ ಬೊಬ್ಬೆ ಹೊಡೆಯಲಾಗುತ್ತಿದೆ. ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ಕೂಡ ಕೊಡಲಾಗುತ್ತಿದ್ದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ನವರಸ ನಾಯಕ ಜಗ್ಗೇಶ್, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್ ಸೇರಿದಂತೆ ಟ್ವೀಟರ್ ನಲ್ಲಿ ತೀಕ್ಷ್ಣವಾಗಿ ಉತ್ತರಿಸಿದ್ದಾರೆ.
ಕಾಮಾಲೆ ಕಣ್ಣಿನವರಿಗೆ ಜಗತ್ತೆಲ್ಲ ಹಳದಿ. ತುಷ್ಟೀಕರಣ, ತುಚ್ಛೀಕರಣಗಳಲ್ಲೇ ಮುಳುಗಿರುವವರ ಯೋಗ್ಯತೆಯೂ ಇಷ್ಟೇ. @BJP4Karnataka ಕ್ಕೆ ಇಂತಹ ಮುಲಾಜುಗಳಿಲ್ಲ. ಸತ್ಯವನ್ನು ಎತ್ತಿ ಹಿಡಿಯುವುದು ಮತ್ತು ಅದನ್ನು ಮಕ್ಕಳಿಗೆ ಕಲಿಸುವುದು ನಮ್ಮ ಸಂಕಲ್ಪ. #ToolkitResignation ಕೆಲಸವನ್ನು ಕಾಂಗ್ರೆಸ್ ಮುಂದುವರೆಸಲಿ.
— Dr. Murugesh R Nirani (@NiraniMurugesh) May 31, 2022
ಸರ್ಕಾರದ ಪ್ರಾಮಾಣಿಕ ಕೆಲಸಕ್ಕೆ ಚುನಾವಣೆ ವರ್ಷದಲ್ಲಿ ವಿಷಯವಿಲ್ಲದೆ ಚಡಪಡಿಸುವ ಕಾಂಗ್ರೆಸ್ಸಿನವರು ಡೊಂಗಿಅಸ್ತ್ರ #congresstoolkit ಬಳಸಿ @BJP4Karnataka ಕಾಲು ಎಳೆಯಲು ಯತ್ನ!
ನೆನಪಿಡಿ ಇಂಥ ಎಷ್ಟೆ ಯತ್ನಮಾಡಿದರು @narendramodi ರವರ ಮಾರ್ಗದರ್ಶನ ಪ್ರಾಮಾಣಿಕತೆ
ಅಭಿವೃದ್ಧಿ ಜನಪರ #ಭಾಜಪ ದೂರಗಾಮಿ ಚಿಂತನೆ ಮುಂದೆ ನಿಮ್ಮಯತ್ನ ನಗಣ್ಯ! pic.twitter.com/5NPZJ0xu7y— ನವರಸನಾಯಕ ಜಗ್ಗೇಶ್ (@Jaggesh2) May 31, 2022
ಸುಳ್ಳಿನ ಕಥೆ ಹಣೆಯುವಲ್ಲಿ ಪಳಗಿರುವ ಕಾಂಗ್ರೆಸ್ ಕೃಪಾಪೋಷಿತ ಸಾಹಿತಿಗಳ ಬಳಗವಿಂದು ತಮ್ಮ ಬೇಳೆ ಬೇಯಿಸಿಕೊಳ್ಳಲಾಗದೇ ಕಂಪಿಸುತ್ತಿದೆ.#ToolkitResignation ತಂತ್ರ ಬಳಸಿ ಸಿಂಪತಿ ಗಿಟ್ಟಿಸಿಕೊಳ್ಳಬಯಸುವ ಇಂಥವರ ಬಗ್ಗೆ @BJP4Karnataka ಸರ್ಕಾರಕ್ಕೆ ಯಾವುದೇ ಮರುಕವಿಲ್ಲ. ಇವರಿಗೆ ನೂತನ ಪಠ್ಯಕ್ರಮ ಪಥ್ಯವಾಗದ ಮಾತ್ರಕ್ಕೆ ಬದಲಾಯಿಸಲಾಗದು.
— Dr. Ashwathnarayan C. N. (@drashwathcn) May 31, 2022