ಹೊಸ ದಿಗಂತ ವರದಿ, ಶಿವಮೊಗ್ಗ:
ಯಾರೋ ಅಭಿಯಾನ ಮಾಡುತ್ತಾರೆ ಎಂದು ಯಾರನ್ನೋ ಬಂಧಿಸಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮದವರ ಜೊತೆ ಮಾತನಾಡಿ, ಬೆಂಗಳೂರಿನಲ್ಲಿ ವ್ಯಕ್ತಿಯೋರ್ವರು ಅರವಿಂದ ಲಿಂಬಾವಳಿ ಅವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಅರವಿಂದ ಲಿಂಬಾವಳಿ ಸೇರಿದಂತೆ ಆರು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಫ್ಐಆರ್ ಆದ ತಕ್ಷಣ ಯಾರನ್ನೋ ಬಂಸಲು ಅವಕಾಶ ಇಲ್ಲ. ಕಾಂಗ್ರೆಸ್ನವರು ಅಭಿಯಾನ ಮಾಡುತ್ತಿದ್ದಾರೆ ಎಂದು ಯಾರನ್ನೋ ಬಂಧಿಸಲು ಆಗುವುದಿಲ್ಲ ಎಂದರು.
ಕಾನೂನು ಪ್ರಕಾರ ಯಾರಾದರೂ ಅಪರಾಧಿ ಎಂದು ಕಂಡುಬಂದರೆ ಪೊಲೀಸರು ಬಂಸುತ್ತಾರೆ. ತನಿಖೆಯಲ್ಲಿಯೇ ನಿರಪರಾಧಿ ಎಂದು ಕಂಡುಬಂದರೆ ಬಂಸಲು ಹೋಗುವುದಿಲ್ಲ ಎಂದರು.