ಬೋನಿಗೆ ಬಿದ್ದ ಚಿರತೆ: ದೂರವಾಯಿತು ಗ್ರಾಮಸ್ಥರ ಆತಂಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆಯ ತುಡಾಮ್ ಬಳಿ ಬುಧವಾರ ತಡರಾತ್ರಿ ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿಗೆ ಚಿರತೆ ಬೋನ್ ಗೆ ಬಿದ್ದಿದೆ.

ಕಳೆದ ಕೆಲವು ದಿನಗಳಿಂದ ಕಿನ್ನಿಗೋಳಿ ಪರಿಸರದ ಏಳಿಂಜೆ ಕೊಲ್ಲೂರು ಪದವು, ಗುತ್ತಗಾಡು ದಾಮಸ್ಕಟ್ಟೆ ಪರಿಸರದಲ್ಲಿ ಚಿರತೆ ಕಾಟ ವಿಪರೀತವಾಗಿದ್ದು ಸ್ಥಳೀಯರು ಭಯ ಭೀತರಾಗಿದ್ದರು .

ಸ್ಥಳೀಯರ ದೂರಿಗೆ ಸ್ಪಂದಿಸಿದ ಕಿನ್ನಿಗೋಳಿ ಪ. ಪಂ. ಮುಖ್ಯಾಧಿಕಾರಿ ಸಾಯಿಶ್ ಚೌಟ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕೆಲವು ತಿಂಗಳಿನಿಂದ ಚಿರತೆಯನ್ನು ಹಿಡಿಯಲು ಕಾರ್ಯಪ್ರವೃತ್ತರಾಗಿ ಚಿರತೆ ಹಿಡಿಯಲು ಅಲ್ಲಲ್ಲಿ ಬೋನ್ ಇರಿಸಿದ್ದರೂ ಪ್ರಯೋಜನವಾಗಿರಲಿಲ್ಲ.

ಆದರೆ ಕಳೆದ ದಿನಗಳ ಹಿಂದೆ ದಾಮಸ್ಕಟ್ಟೆಯ ತುಡಾಮ್ ಬಳಿ ಚಿರತೆ ಹಿಡಿಯಲು ಇರಿಸಿದ್ದ ಬೋನ್ ಗೆ ಬುಧವಾರ ತಡರಾತ್ರಿ ಚಿರತೆ ಬಿದ್ದಿದೆ. ಅರಣ್ಯ ಅಧಿಕಾರಿಗಳಾದ ರಾಜು ನೇತೃತ್ವದಲ್ಲಿ ಬೋನ್ ನಲ್ಲಿ ಸೆರೆಯಾದ ಚಿರತೆಯನ್ನು ಸ್ಥಳಾಂತರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!