ಮೈದಾನಕ್ಕೆ ನುಗ್ಗಿದ ಪುಟ್ಟ ಬಾಲಕ: ಈ ವೇಳೆ ರೋಹಿತ್ ಕೊಟ್ಟ ಸೂಚನೆಗೆ ಅಭಿಮಾನಿಗಳು ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ವೇಳೆ ಪುಟ್ಟ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ಬಿಗಿದಪ್ಪಿಕೊಂಡಿದ್ದಾನೆ.

ಆತ ಮೈದಾನಕ್ಕೆ ಬರುತ್ತಿದ್ದಂತ ಭದ್ರತಾ ಸಿಬ್ಬಂದಿಗಳು ಹಿಡಿದಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿಗಳಿಗೆ ರೋಹಿತ್ ಶರ್ಮಾ ಮಹತ್ವದ ಸೂಚನೆ ನೀಡಿದ್ದಾರೆ. ಪುಟ್ಟ ಅಭಿಮಾನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬೇಡಿ, ಏನೂ ಮಾಡಬೇಡಿ ಎಂದು ಸೂಚನೆ ನೀಡಿದ್ದಾರೆ.

ಟೀಂ ಇಂಡಿಯಾ ಚೇಸಿಂಗ್ ಇಳಿದ ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ದಿಟ್ಟ ಹೋರಾಟದ ಮೂಲಕ ಭಾರತಕ್ಕೆ ನೆರವಾದರು. ರೋಹಿತ್ ಶರ್ಮಾ ಭಾರತವನ್ನು ಗೆಲುವಿನ ದಡ ಸೇರಿಸುವ ಲೆಕ್ಕಾಚಾರ ಹಾಕಿಕೊಂಡಿದ್ದರು. ಇದೇ ವೇಳೆ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಪುಟ್ಟ ಬಾಲಕನೋರ್ವ ಮೈದಾನಕ್ಕೆ ನುಗ್ಗಿದ್ದಾನೆ .

ಬಾಲಕನ ಹಿಂದೆ ಭದ್ರತಾ ಸಿಬ್ಬಂದಿಗಳು ಅದೇ ವೇಗದಲ್ಲಿ ಓಡೋಡಿ ಬಂದರು. ಆದರೆ ಬಾಲಕ ನೇರವಾಗಿ ಪಿಚ್ ಬಳಿ ಬಂದು ರೋಹಿತ್ ಶರ್ಮಾರನ್ನು ಬಿಗಿದಿಪ್ಪಿಕೊಂಡ. ಅಷ್ಟರಲ್ಲೇ ಭದ್ರತಾ ಸಿಬ್ಬಂದಿಗಳು ಬಾಲಕನ ಕೆಳಕ್ಕೆ ಬೀಳಿಸಿ ಹಿಡಿದು ಬಿಟ್ಟರು. ಗಾಬರಿಗೊಂಡ ರೋಹಿತ್ ಶರ್ಮಾ, ಪುಟ್ಟ ಅಭಿಮಾನಿಗೆ ಏನೂ ಮಾಡಬೇಡಿ. ಈ ಅಭಿಮಾನಿ ಬಾಲಕ, ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಭದ್ರತಾ ಸಿಬ್ಬಂಧಿಗಳಿಗೆ ಸೂಚನೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!