ಗೋಡೆ ಮೇಲೆ ಡೆತ್’ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

ಹೊಸದಿಗಂತ ವರದಿ, ಮಡಿಕೇರಿ
ಗೋಡೆ ಮೇಲೆ ಡೆತ್ ನೋಟ್ ಬರೆದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ.
ಮಡಿಕೇರಿಯ ಜ್ಯೋತಿನಗರ ನಿವಾಸಿ ಯೋಗೇಂದ್ರ ಎಂಬವರೇ ಆತ್ಮಹತ್ಯೆ‌ ಮಾಡಿಕೊಂಡವರಾಗಿದ್ದಾರೆ.
ಸುಂಟಿಕೊಪ್ಪದ ಮಾದಾಪುರ ರಸ್ತೆಯಲ್ಲಿರುವ ರಾಮ ಕಾಂಪ್ಲೆಕ್ಸ್ ನ ಸಂಕೀರ್ಣದ ಪಕ್ಕದಲ್ಲಿರುವ ಖಾಲಿ ಜಾಗದ ಮೇಲ್ಛಾವಣಿಗೆ ತನ್ನ ಪಂಚೆಯನ್ನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ.
ಸಾವಿಗೂ ಮುನ್ನ ಅಲ್ಲಿಯ ಗೋಡೆಯ ಮೇಲೆ ಡೆತ್ ನೋಟ್ ಬರೆದಿರುವ ಯೋಗೇಂದ್ರ, ಅದರಲ್ಲಿ ‘ನನ್ನ ಸಾವಿಗೆ ಹೆಂಡತಿ ಸರಸ್ಚತಿ ಮತ್ತು ಆಕೆಯ ತಮ್ಮ ಕೃಷ್ಣ ಕಾರಣ ಎಂದು ಬರೆದು ಅವರ ಮೊಬೈಲ್ ನಂಬರ್’ನ್ನೂ ನಮೂದಿಸಿದ್ದಾರೆ.
ಈತ ಈ ಹಿಂದೆ ಸುಂಟಿಕೊಪ್ಪದಲ್ಲಿ ಕೇಬಲ್ ಕೆಲಸ ಮಾಡುತ್ತಿದ್ದು, ಹರದೂರುವಿನ ಸಂಬಂಧಿಕರ ಮನೆಗೆ ಹೋಗಿ ಬರುತ್ತಿದ್ದರೆನ್ನಲಾಗಿದೆ.ಈ ಹಿಂದೆಯೂ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಈತ ಮೂರು ದಿನಗಳ ಹಿಂದೆ ಆಸ್ಪತ್ರೆಯಿಂದ ಡಿಸಾರ್ಜ್ ಆಗಿದ್ದರೆಂದು ಹೇಳಲಾಗಿದೆ.
ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯ ಬಳಿಕವಷ್ಟೇ ಯೋಗೇಂದ್ರ ಆತ್ಮಹತ್ಯೆಯ ಹಿಂದಿನ ನೈಜ ಕಾರಣ ಬೆಳಕಿಗೆ ಬರಬೇಕಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!