ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಬೆಂಗಳೂರು ನಗರದಲ್ಲಿ ಮತ್ತೊಬ್ಬ ರೌಡಿಶೀಟರ್ನ ಹತ್ಯೆ ನಡೆದಿದೆ. ಅಶೋಕನಗರದ ಫುಟ್ಬಾಲ್ ಸಂಸ್ಥೆ ಆವರಣದಲ್ಲೇ ಅರವಿಂದ್(30)ಹೆಸರಿನ ರೌಡಿಶೀಟರ್ನನ್ನ ಕೊಚ್ಚಿ ಕೊಲೆಗೈಯ್ಯಲಾಗಿದೆ.
ಅರವಿಂದ್ ಅಶೋಕನಗರ ವ್ಯಾಪ್ತಿಯ ರೌಡಿಶೀಟರ್ ಆಗಿದ್ದ. ಫುಟ್ಬಾಲ್ ಆಟಗಾರನೂ ಆಗಿದ್ದ ಅರವಿಂದ್ ಫುಟ್ಬಾಲ್ ಟೀಂ ಒಂದಕ್ಕೆ ಮ್ಯಾನೇಜರ್ ಕೂಡ ಆಗಿದ್ದ ಎನ್ನಲಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಗೂಂಡಾ ಆಕ್ಟ್ ನಡಿ ಜೈಲುಪಾಲಾಗಿದ್ದ ಅರವಿಂದ್ನನ್ನ ಭಾರತೀನಗರ ಪೊಲೀಸರು ಗೂಂಡಾ ಆಯಕ್ಟ್ ಅಡಿಯಲ್ಲಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದರಂತೆ. ಆದ್ರೆ ಇತ್ತೀಚೆಗೆ ಜಾಮೀನು ಪಡೆದು ಜೈಲಿಂದ ಹೊರಬಂದಿದ್ದ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತ ಹೇಳಿಕೆ ನೀಡಿರುವ ಡಿಸಿಪಿ ಅನುಚೇತ್, ಸಂಜೆ 4:30 ಕ್ಕೆ ಘಟನೆ ನಡೆದಿದೆ.ಯಾವುದೋ ಗಲಾಟೆ ಆಗಿ ಸಂಜೆಕೊಲೆ ಮಾಡಿದ್ದಾರೆ.ಸ್ಥಳದಲ್ಲಿನ ಸಿಸಿಟಿವಿ ಸಿಕ್ಕಿದೆ, ಅದನ್ನ ಪರಿಶೀಲನೆ ನಡೆಸ್ತಿದ್ದೇವೆ. ಕೊಲೆಗೆ ನಿಖರ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸುತ್ತೇವೆ ಎಂದಿದ್ದಾರೆ.