ಗೋವುಗಳ ರಕ್ಷಣೆಗೆ ಮುಂದಾದ ಪೊಲೀಸ್, ಚಾಲಕನ ಅಚಾತುರ್ಯಕ್ಕೆ ಬಲಿಯಾದ ಕರುಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಸನದಲ್ಲಿ ಕಂಟೇನರ್‌ನಲ್ಲಿ ಗೋವುಗಳ ಅಕ್ರಮ ಸಾಗಣೆ ಮಾಡುವ ಮಾಹಿತಿ ದೊರಕಿದ್ದು, ಪೊಲೀಸರು ಕಂಟೇನರ್‌ನ್ನು ಚೇಸ್ ಮಾಡಿ ಹಸುಗಳನ್ನು ರಕ್ಷಿಸಿದ್ದಾರೆ.

ಪೊಲೀಸರು ಕಂಟೇನರ್‌ನ್ನು ಚೇಸ್ ಮಾಡುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಗಾಬರಿಯಾದ ಚಾಲಕ, ಅಡ್ಡಾದಿಡ್ಡಿ ಗಾಡಿ ಓಡಿಸಿದ್ದಾನೆ. ಇದರಿಂದಾಗಿ ಕಂಟೇನರ್ ಪಲ್ಟಿಯಾಗಿದ್ದು, ಏಳು ಕರುಗಳು ಮೃತಪಟ್ಟಿವೆ.

30ಕ್ಕೂ ಹೆಚ್ಚು ಹಸುಗಳನ್ನು ರಕ್ಷಿಸಲಾಗಿದೆ. ಕಂಟೇನರ್ ಪಲ್ಟಿಯಾದ ತಕ್ಷಣವೇ ಚಾಲಕ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ, ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!