ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶವನ್ನೇ ಬೆಚ್ಚಿಬೀಳಿಸಿದ ದೆಹಲಿಯ ಶ್ರದ್ಧಾ ಬರ್ಬರ ಹತ್ಯೆ ಪ್ರಕರಣ ಬೆಳ್ಳಿ ತೆರೆ ಏರಲು ಸಜ್ಜಾಗುತ್ತಿದೆ.
ಶ್ರದ್ಧಾ ಹತ್ಯೆಯ ಪ್ರಕರಣದ ಕುರಿತಾಗಿ ಚಿತ್ರ ನಿರ್ಮಿಸುತ್ತಿದೇನೆ ಎಂದು ನಿರ್ಮಾಪಕ ಮತ್ತು ನಿರ್ದೇಶಕ ಮನೀಶ್ ಎಫ್ ಸಿಂಗ್ ಹೇಳಿದ್ದಾರೆ.
ಈಗಾಗಲೇ ಶ್ರದ್ಧಾ ಹತ್ಯೆ ಪ್ರಕರಣ ಹೊಸ ಆಯಾಮ ಪಡೆಯುತ್ತಿದ್ದು,ಅಫ್ತಾಬ್ ಮಾತ್ರವಲ್ಲ ಆತನ ಕುಟುಂಬದ ಸದಸ್ಯರೂ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸುದ್ದಿಯ ನಂತ್ರ ಅಫ್ತಾಬ್ ಕುಟುಂಬವೂ ನಾಪತ್ತೆಯಾಗಿದೆ. ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಅವರ ವಿರುದ್ಧ ಸಾಕ್ಷ್ಯ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ. ಈ ಭೀಭತ್ಸ್ಯ ಕೃತ್ಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ನಡುವೆಯೇ ಮನೀಶ್ ಹೇಳಿಕೆ ಹೊಸ ಕುತೂಹಲ ಮೂಡಿಸಿದೆ.