ಕುದುರೆ ಬದುಕಿಸಲು ಹೋದ ಯುವಕರು, ಕುದುರೆ ಜೊತೆಗೆ ಅವರೂ ಉಳಿಯಲಿಲ್ಲ !

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್‌ನ ರಾಜೇಂದ್ರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುದುರೆಯನ್ನು ಉಳಿಸಲು ಹೋದ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.

ಸೈಫ್ ಹಾಗೂ ಅನುಸಿಂಗ್ ಮೃತರು. ಅಜಮ್ ಎನ್ನುವವರು ತೆಲಂಗಾಣದಲ್ಲಿ ಹಾರ್ಸ್ ರೈಡಿಂಗ್ ತರಬೇತಿ ಸಂಸ್ಥೆ ನಡೆಸುತ್ತಿದ್ದರು. ಅನುಸಿಂಗ್ ಅಲ್ಲಿ ರೈಡಿಂಗ್ ಕಲಿಯೋದಕ್ಕೆ ಬಂದಿದ್ದರು.

ರೈಡಿಂಗ್ ಪ್ರಾಕ್ಟೀಸ್ ವೇಳೆ ಕಿಸ್ಮತ್‌ಪುರ ಕಡೆಗೆ ಬಂದಿದ್ದು, ಕುದುರೆ ನೀರು ಕುಡಿಯಲು ನಾಲೆಗೆ ಹೋಗಿದೆ. ಆದರೆ ಕುದುರೆ ಮರಳಿನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿರುವುದನ್ನು ಅನುಸಿಂಗ್ ಗಮನಿಸಿದ್ದು, ತಕ್ಷಣ ಸಹಾಯಕ್ಕೆ ಅಜಮ್ ಹಾಗೂ ಅವರ ಮಗ ಸೈಫ್ ಧಾವಿಸಿದ್ದಾರೆ.

ಅನುಸಿಂಗ್ ಹಾಗೂ ಕುದುರೆಯನ್ನು ರಕ್ಷಿಸಲು ಸೈಫ್ ಹಾಗೂ ಅನುಸಿಂಗ್ ನೀರಿಗೆ ಇಳಿದಿದ್ದು, ಕುದುರೆ ರಕ್ಷಣೆಗೆ ಪ್ರಯತ್ನ ಮಾಡಿದ್ದಾರೆ. ಈಜು ಬಾರದ ಕಾರಣ ಇಬ್ಬರೂ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತಕ್ಷಣ ಪೊಲೀಸರು ಆಗಮಿಸಿದ್ದು, ಕುದುರೆ, ಇಬ್ಬರು ಯುವಕರ ಮೃತದೇಹ ಮೇಲೆತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!