ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಕಾನ್ಪುರದಲ್ಲಿ ಕುಟುಂಬವೊಂದು ವ್ಯಕ್ತಿಯ ಮೃತದೇಹವನ್ನು 18 ದಿನಗಳಿಂದ ಮನೆಯಲ್ಲಿಯೇ ಇಟ್ಟುಕೊಂಡಿದೆ. ಕೋಮಾದಲ್ಲಿದ್ದಾನೆ, ಸರಿಯಾಗುತ್ತಾನೆ ಎಂದು ಹೇಳುತ್ತಲೇ ಇದ್ದಾರೆ.
ಉಸಿರಾಟದ ತೊಂದರೆಯಿಂದ ವಿಮಲೇಶ್ ಮೃತಪಟ್ಟಿದ್ದಾರೆ. ವಿಮಲೇಶ್ ಪತ್ನಿ ತನ್ನ ಪತಿ ಕೋಮಾದಿಂದ ಹೊರಬರಲಿ ಎಂದು ಪ್ರತಿದಿನವೂ ವಿಮಲೇಶ್ ಕಾಲಿಗೆ ಗಂಗಾಜಲ ಪ್ರೋಕ್ಷಣೆ ಮಾಡುತ್ತಿದ್ದಾರೆ. ಕೋಮಾದಲ್ಲಿದ್ದಾರೆ ಎಂದು ನಂಬಿರುವ ಕುಟುಂಬ ಅಂತಿಮ ವಿಧಿ ವಿಧಾನ ಕೂಡ ನೆರವೇರಿಸಿಲ್ಲ.
ಸುಮಾರು ದಿನದಿಂದ ಆಫೀಸ್ಗೆ ವಿಮಲೇಶ್ ಬಂದಿರಲಿಲ್ಲ. ಆರೋಗ್ಯ ಇಲಾಖೆ ತಂಡ ವಿಮಲೇಶ್ ಅವರ ಮನೆಗೆ ಬಂದು ಅವರನ್ನು ಕಾಣಬೇಕು ಎಂದಾಗ, ಅವರು ಕೋಮಾದಲ್ಲಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ. ಸಾಕಷ್ಟು ಮನವೊಲಿಸಿ ವಿಮಲೇಶ್ ಮೃತದೇಹವನ್ನು ತಪಾಸಣೆಗೆ ಎಂದು ಹೇಳಿ ಆಸ್ಪತ್ರೆಗೆ ಕರೆತಂದಿದ್ದಾರೆ. ಇಲ್ಲಿ ಪರೀಕ್ಷೆಗಳ ನಂತರ ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಮೃತದೇಹ ಕೊಳೆತ ಸ್ಥಿತಿಯಲ್ಲಿತ್ತು ಎಂದು ವೈದ್ಯರು ತಿಳಿಸಿದ್ದಾರೆ.