ಇದೇನಿದು ಹೊಸ ಟ್ವಿಸ್ಟ್, ನಾಮಪತ್ರ ಸಲ್ಲಿಸೋಕೆ ಹೊರಟ ಡಿ.ಕೆ.ಸುರೇಶ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡುತ್ತಿದೆ. ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಸೋಕೆ ಬೆಂಗಳೂರಿಗೆ ಹೋಗ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ನಾಮಪತ್ರ ಸಲ್ಲಿಸೋದೇನೋ ಸರಿ, ಆದರೆ ಯಾವ ಕ್ಷೇತ್ರದಿಂದ ಎನ್ನುವ ಗುಟ್ಟನ್ನು ಡಿಕೆ ಸುರೇಶ್ ಬಿಟ್ಟುಕೊಟ್ಟಿಲ್ಲ. ರಾಮನಗರದಲ್ಲಿ ಈ ಬಗ್ಗೆ ಮಾತನಾಡಿದ್ದು, ಈಗ ನಾಮಪತ್ರ ಸಲ್ಲಿಸೋಕೆ ಹೋಗ್ತಾ ಇದ್ದೇನೆ, ಯಾವ ಕ್ಷೇತ್ರ ಅಂತ ನನಗೂ ಗೊತ್ತಿಲ್ಲ, ವರಿಷ್ಠರ ಸೂಚನೆಯಂತೆ ಮಾಡುತ್ತೇನೆ. ಆದರೆ ನಾಮಪತ್ರ ಸಲ್ಲಿಸೋದಂತೂ ಗ್ಯಾರೆಂಟಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!