ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಮೂರನೇ ಅಲೆ ನಡುವೆ ಇಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ.
ಈ ಬಾರಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಸಿಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಈ ಬಾರಿ ಬಜೆಟ್ ಬಗ್ಗೆ ನಮಗೆ ಹಲವು ನಿರೀಕ್ಷೆಗಳಿವೆ. ಮುಖ್ಯವಾಗಿ ಆರೋಗ್ಯ ಕ್ಷೇತ್ರಕ್ಕೆ ಒತ್ತು ಸಿಗಲಿದೆ.
ಮಹಿಳೆ, ಯುವಪೀಳಿಗೆಗೂ ಪೂರಕವಾದ ಬಜೆಟ್ ಇದಾಗಿರಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಶಯ ಬಜೆಟ್ನಲ್ಲಿ ಕಾಣಲಿದೆ. ಈ ಹಿಂದೆ ಮೋದಿ ಅವರು ರಾಜ್ಯಕ್ಕೆ 850 ಕೋಟಿ ರೂ. ಬಿಡುಗಡೆ ಮಾಡಿದ್ದರು ಎಂದಿದ್ದಾರೆ.