ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಯಶೋಧಾ, ಸುಮನ್ ಹಾಗೂ ನರೇಶ್ ಗುಪ್ತಾ ಮೃತರು. ತಾಯಿ ಯಶೋಧಾ ಹಾಗೂ ಇಬ್ಬರು ಮಕ್ಕಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಯಶೋಧಾಗೆ ಮೂರು ಮಕ್ಕಳಿದ್ದು, ಮಗಳೊಬ್ಬಳು ಮದುವೆಯಾಗಿ ರಾಜಾಜಿನಗರ್ನಲ್ಲಿ ವಾಸಿಸುತ್ತಿದ್ದಾಳೆ.
ಯಶೋಧಾಗೆ ಹಲವು ಬಾರಿ ಸಂಬಂಧಿಕರು ಕರೆ ಮಾಡಿದ್ದರೂ ಕರೆ ಸ್ವೀಕರಿಸಿರಲಿಲ್ಲ. ಹಾಗಾಗಿ ರಾಜಾಜಿನಗರದ ಮಗಳಿಗೆ ಕರೆ ಮಾಡಿ ತಿಳಿಸಿದ್ದಾರೆ. ಮನೆಗೆ ಬಂದು ನೋಡಿದಾಗ ಯಾರೂ ಕರೆ ಸ್ವೀಕರಿಸಿಲ್ಲ. ಅನುಮಾನ ಬಂದು ಬಾಗಿಲು ಒಡೆದಾಗ ಮೂವರು ಮೃತಪಟ್ಟಿರುವುದು ಕಂಡಿದೆ. ತಕ್ಷಣವೇ ಪೊಲೀಸರಿಗೆ ಮಗಳು ಮಾಹಿತಿ ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.