ಹೊಸದಿಗಂತ ಡಿಜಿಟಲ್ ಡೆಸ್ಕ್ :
ತಿರುಪತಿಯ ತಿಮ್ಮಪ್ಪನ ದರುಶನಕ್ಕೆ ಹೋಗಬೇಕೆಂದುಕೊಂಡರೂ ಒಂದೇ ದಿನದಲ್ಲಿ ದರುಶನ ಪಡೆಯಲು ಸಾಧ್ಯವಿಲ್ಲವೆಂದು ಭಾವಿಸಿ, ಸಮಯದ ಅಭಾವದಿಂದ ಪ್ರಯಾಣ ಕೈಗೊಳ್ಳದ ಎಷ್ಟೋ ಮಂದಿ ಇದ್ದಾರೆ. ಅಂಥವರಿಗಾಗಿಯೇ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ) ಬಂಪರ್ ಕೊಡುಗೆಯೊಂದನ್ನು ನೀಡಿದೆ.
ಒಂದೇ ದಿನದಲ್ಲಿ ಕೇವಲ 990 ರೂ. ಪಾವತಿಸಿ ತಿಮ್ಮನ ದರ್ಶನ ಪಡೆಯುವ ಅವಕಾಶ ಏ.15ರಂದು ಲಭ್ಯವಿದೆ.
ಬಾಲಾಜಿ ದರುಶನಕ್ಕೆಂದು ತಿರುಪತಿಗೆ ಹೋಗಲು ಇಚ್ಚಿಸುವವರು ಐಆರ್ಸಿಟಿಸಿ ಮೂಲಕ ಬಾಲಾಜಿ ದರ್ಶನ್ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಟಿಕೆಟ್ ಬುಕ್ ಮಾಡಿಕೊಂಡವರನ್ನು ತಿರುಪತಿ ರೈಲ್ವೆ ನಿಲ್ದಾಣದಿಂದ ಐಆರ್ಸಿಟಿಸಿ ರಸ್ತೆಸಾರಿಗೆ ಕರೆದೊಯ್ಯಲಿದೆ. ಪ್ಯಾಕೇಜ್ನ ನಿಯಮದಂತೆ ಎಸಿ ಬಸ್ನಲ್ಲಿ ಪ್ರಯಾಣಿಕರನ್ನು ಕರೆದೊಯ್ದು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಸಲಾಗುತ್ತದೆ. ಅಷ್ಟೇ ಅಲ್ಲದೇ, ಬಾಲಾಜಿ ದರ್ಶನದ ಜತೆಗೆ ತಿರುಚಾನೂರು ಪದ್ಮಾವತಿ ದರ್ಶನವನ್ನೂ ಮಾಡಿಸಲಾಗುತ್ತದೆ.
ದರ್ಶನದ ಬಳಿಕ ಪ್ರಯಾಣಿಕರನ್ನು ಮತ್ತೆ ರೈಲ್ವೆ ನಿಲ್ದಾಣಕ್ಕೆ ಕರೆದೊಯ್ಯಲಾಗುತ್ತದೆ.