ಇಂದು ಗ್ಯಾಂಗ್​ಸ್ಟರ್​ಗಳ ಪ್ಯಾಂಟ್​ ಒದ್ದೆಯಾಗುತ್ತಿದೆ, ಜೀವ ಉಳಿಸಿಕೊಳ್ಳಲು ಓಡುವಂತಾಗಿದೆ: ಸಿಎಂ ಯೋಗಿ ಆದಿತ್ಯನಾಥ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಉತ್ತರ ಪ್ರದೇಶದಲ್ಲಿಇಷ್ಟು ವರ್ಷಗಳ ಕಾಲ ಕಾನೂನಿನ ಹೆದರಿಕೆ ಇಲ್ಲದೆ ಜನರನ್ನು ಸುಲಿಗೆ ಮಾಡುತ್ತಿದ್ದವರು, ಅಪಹರಣ ಮಾಡುತ್ತಿದ್ದವರೆಲ್ಲ ಈಗ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ ಮತ್ತು ಅವರ ಪ್ಯಾಂಟ್​ ಒದ್ದೆಯಾಗುತ್ತಿರುವುದು ಕಾಣುತ್ತಿದೆ ಎಂದು ಉಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath) ಹೇಳಿದ್ದಾರೆ.

ಗೋರಖ್​ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ,​ ‘ಪ್ರತಿಯೊಬ್ಬರ ಸುರಕ್ಷತೆಯೂ ನಮ್ಮ ಸರ್ಕಾರದ ಜವಾಬ್ದಾರಿ. ನಾಗರಿಕರೆಲ್ಲರೂ ನೆಮ್ಮದಿಯಿಂದ ಬದುಕಬೇಕು ಎಂಬುದು ಆಶಯ. ಆರು ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಗೂಂಡಾಗಳು, ಮಾಫಿಯಾಗಳು ಇಲ್ಲಿನ ಉದ್ಯಮಿಗಳನ್ನು, ಜನರನ್ನು ಬಹಿರಂಗವಾಗಿ ಬೆದರಿಸುತ್ತಿದ್ದರು. ಆದರೆ ನಮ್ಮ ಸರ್ಕಾರ ಬಂದ ಮೇಲೆ ಎಲ್ಲವೂ ಬದಲಾಗಿದೆ. ಅಂಥ ಗೂಂಡಾಗಳೆಲ್ಲ ಈಗ ತಮ್ಮ ಜೀವ ಉಳಿಸಿಕೊಳ್ಳಲು ಓಡುವಂತಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!