ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ಸ್ವಾಮೀಜಿಯೊಬ್ಬರು ಶಾರುಖ್ಖಾನ್ರನ್ನು ಜೀವಂತವಾಗಿ ಸುಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡಿನಿಂದ ಇಷ್ಟೆಲ್ಲಾ ವಿವಾದ ಸೃಷ್ಟಿಯಾಗಿದ್ದು, ಕೇಸರಿಯನ್ನು ನಾಚಿಕೆಯಿಲ್ಲದ ಬಣ್ಣ ಎಂದು ಹಾಡಿನಲ್ಲಿ ಉಲ್ಲೇಖಿಸಲಾಗಿದೆ ಎನ್ನುವುದು ಹಲವರ ವಾದ.
ಈ ಹಿನ್ನೆಲೆಯಲ್ಲಿ ಅಯೋಧ್ಯೆಯ ಪರಮಹಂಸ ಆಚಾರ್ಯ ಸ್ವಾಮೀಜಿ ಬೆದರಿಕೆ ಹಾಕಿದ್ದು, ಇಂದು ಶಾರುಖ್ ಪೋಸ್ಟ್ ಸುಟ್ಟಿದ್ದೇವೆ, ನಾಳೆ ಶಾರುಖ್ ಅವರನ್ನೇ ಜೀವಂತ ಸುಟ್ಟು ಹಾಕುತ್ತೇವೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಪಠಾಣ್ ಸಿನಿಮಾ ಏನಾದ್ರೂ ಥಿಯೇಟರ್ನಲ್ಲಿ ರಿಲೀಸ್ ಆದರೆ ಥಿಯೇಟರ್ಗೂ ಬೆಂಕಿ ಇಡುತ್ತೇನೆ ಎಂದು ಸ್ವಾಮೀಜಿ ಹೇಳಿದ್ದಾರೆ.