ದಿನಭವಿಷ್ಯ: ಇಂದು ನಿಮ್ಮ ಮೇಲಧಿಕಾರಿಗಳ ಜತೆ ವಿನಯದಿಂದ ವರ್ತಿಸಿ, ಇಲ್ಲಾ ಎಂದರೆ ಸಮಸ್ಯೆ ತಪ್ಪಿದ್ದಲ್ಲ!

ಶುಕ್ರವಾರ, 21 ಜನವರಿ 2022,

ಮೇಷ
ಕುಟುಂಬಸ್ಥರೊಂದಿಗೆ ಕಾಲ ಕಳೆಯಬೇಕಾದ ದಿನ. ಕೆಲಸದ ಒತ್ತಡ ಹೆಚ್ಚಿದ್ದರೂ ಅದನ್ನು ಬದಿಗೆ ಸರಿಸಿ. ಕೆಲದಿನ ಗಳಿಂದ ಕಾಡುತ್ತಿದ್ದ  ಟೆನ್ಶನ್ ಶಮನ.

ವೃಷಭ
ವೃತ್ತಿಯಲ್ಲಿ ಮೇಲಕಾರಿಗಳ ಜತೆ ವಿನಯ ದಿಂದ ವರ್ತಿಸಿ. ಗ್ರಹಗತಿ ಇಂದು ಸೂಕ್ತ ಸಂಗಾತಿಯನ್ನು ನಿಮಗೆ ತೋರಲಿದೆ. ಆರೋಗ್ಯ ಸುಸ್ಥಿರಗೊಳ್ಳಲಿದೆ.

ಮಿಥುನ
ಇಷ್ಟಪಟ್ಟ ವ್ಯಕ್ತಿಯ ಜತೆ ಕಾಲ ಕಳೆಯುವ ಅವಕಾಶ. ಉದ್ಯಮಿ ಗಳಿಗೆ ತುಸು ಆರ್ಥಿಕ ಸಂಕಷ್ಟ. ಶಾಪಿಂಗ್‌ಗೆ ತೆರಳುವವರು ಖರ್ಚಿನ ಮೇಲೆ ನಿಗಾ ಇಡಿ.

ಕಟಕ
ಕೆಲಸದಲ್ಲಿ ಸಣ್ಣಪುಟ್ಟ ಕಿರಿಕಿರಿಗಳು. ಶಾಂತಿಯಿಂದ ಕೆಲಸ ಮಾಡಲು ಸಾಧ್ಯವಾಗದು. ಹಣಕಾಸು ತೊಂದರೆ ಕಾಡಬಹುದು.

ಸಿಂಹ
ಸಹೋದ್ಯೋಗಿ ಜತೆ ವೈಮನಸ್ಸು  ಮೂಡಬಹುದು. ಬಾಕಿಯಿರುವ ಕೆಲಸವೊಂದು ಪೂರೈಸುವುದು. ಕೌಟುಂಬಿಕ ಸಹಕಾರ.

ಕನ್ಯಾ
ವೃತ್ತಿ ಬದುಕಿನಲ್ಲಿ ಏರುಪೇರುಗಳಿಲ್ಲದ ದಿನ. ಖಾಸಗಿ ಬದುಕಿನಲ್ಲಿ ಮಾತ್ರ ಮಹತ್ವದ ಬೆಳವಣಿಗೆ ಸಂಭವಿಸಬಹುದು. ಆರ್ಥಿಕ ಸ್ಥಿರತೆ.

ತುಲಾ
ಕಚೇರಿಯಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಅವಿವಾಹಿತರಿಗೆ ವಿವಾಹದ ಒತ್ತಡ.ಉದ್ಯಮದಲ್ಲಿ ಹೂಡಿಕೆಗೆ ಒಳ್ಳೆಯ ದಿನ. ಧನ ಲಾಭ ಸಾಧ್ಯತೆ.

ವೃಶ್ಚಿಕ
ದೈಹಿಕ ನೋವಿನಿಂದ ಬಳಲುತ್ತಿದ್ದರೆ ಇಂದು ಅದರಿಂದ ಮುಕ್ತಿ. ಕೌಟುಂಬಿಕ ಹೊಣೆಗಾರಿಕೆ ಸಡಿಲ.ಈ ವಿಷಯದಲ್ಲಿ  ಇತರರ ನೆರವು ಲಭಿಸುವುದು.

ಧನು
ಕೌಟುಂಬಿಕ ಉದ್ವಿಗ್ನತೆ ನಿವಾರಣೆ. ಶಾಂತಿ ನೆಲೆಸುವುದು. ನಿಮ್ಮನ್ನು ತಿದ್ದಿಕೊಳ್ಳಲು ಯತ್ನಿಸುವುದರಿಂದ ಮಾನಸಿಕ ನೆಮ್ಮದಿ ಪಡೆಯುವಿರಿ.

ಮಕರ
ಇತರರ ವ್ಯವಹಾರದಲ್ಲಿ ಮೂಗು ತೂರಿಸಿದರೆ ನಿಮಗೇ ತೊಂದರೆ. ವೃತ್ತಿಯಲ್ಲಿ ಸಮಸ್ಯೆಗಳು ಕಾಡುತ್ತವೆ. ದೇವರ ಪ್ರಾರ್ಥನೆ ಯಿಂದ ಶಾಂತಿ.

ಕುಂಭ
ನೀವು ಇಂದು ಏನು ಗುರಿ ಹಾಕಿಕೊಂಡಿ ದ್ದೀರೋ ಅದು ಸಾತವಾಗದು. ಅಡ್ಡಿಗಳು ಒದಗುತ್ತವೆ. ಕೆಲವರಿಂದ ಅಸಹಕಾರ. ಕೌಟುಂಬಿಕ ಆರ್ಥಿಕ ಸಮಸ್ಯೆ.

ಮೀನ
ಕಷ್ಟ ಬಂದರೂ ಅದನ್ನು ಎದುರಿಸುವ ತಾಳ್ಮೆ. ನಿಷ್ಠೆ ಹೊಣೆಗಾರಿಕೆ,ಯಾವುದೇ ಕೆಲಸ ಪರಿಪೂರ್ಣ ವಾಗಲು ಸಹಕರಿಸು ವುದು ಶಾಂತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!