ದಿನಭವಿಷ್ಯ| ಇಂದು ನಿಮ್ಮ ಮಾತುಗಳು ವಾಗ್ವಾದಕ್ಕೆ ಕಾರಣವಾದೀತು…

ದಿನಭವಿಷ್ಯ

ಮೇಷ: ನಿಮ್ಮ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ಒತ್ತು ಕೊಡುವಿರಿ. ಆಪ್ತೇಷ್ಟರ ಹಿತಾಸಕ್ತಿಯನ್ನು ಕಾಪಾಡಲು ಆದ್ಯತೆ ಕೊಡಿ. ಧನ ವ್ಯಯ. ಖರೀದಿ ಉತ್ಸಾಹ.

ವೃಷಭ: ಬಿಡುವಿಲ್ಲದ ದಿನ. ಕೌಟುಂಬಿಕ ಕಾರ್ಯಗಳು ಇಂದು ಆದ್ಯತೆ ಪಡೆಯುತ್ತವೆ. ಬಂಧು ಭೇಟಿ, ಮಹತ್ವದ ವಿಷಯ ಚರ್ಚೆಯಾದೀತು.

ಮಿಥುನ: ಇಂದು ಉಲ್ಲಾಸದ ಮನೋಭಾವ. ಮನೆಯವರೊಂದಿಗೆ ಕೂಡಿ ಬೆರೆಯುವ ಕಾಲ. ಕಳೆದುಹೋದ ಸಂತೋಷವನ್ನು ಮರಳಿ ಪಡೆಯುವಿರಿ.

ಕಟಕ: ನಿಮ್ಮನ್ನು ಕೆಳಕ್ಕೆ ತಳ್ಳಲು ಹಲವರು ಪ್ರಯತ್ನಿಸುತ್ತಾರೆ. ಹಾಗಾಗಿ ನಿಮ್ಮ ಎಚ್ಚರಿಕೆಯಲ್ಲಿ ನೀವಿರಬೇಕು. ಆರ್ಥಿಕ ಲಾಭ ಸಂಭವ.

ಸಿಂಹ: ಖಾಸಗಿ ಬದುಕಿನಲ್ಲಿ ಕೆಲವು ಮಹತ್ತರ ಬದಲಾವಣೆ ಉಂಟಾದೀತು. ಕೌಟುಂಬಿಕ ಸಂಬಂಧ ಗಟ್ಟಿಯಾಗುವುದು. ಹೆಚ್ಚು ಖರ್ಚು.

ಕನ್ಯಾ:
ಮನೆಯಲ್ಲಿ ಇಂದು ಹೆಚ್ಚು ಕಾಲ ಕಳೆಯಬೇಕಾಗುವುದು. ಬಾಕಿ ಉಳಿದ ಪ್ರಮುಖ ಕಾರ್ಯಗಳನ್ನು ಪೂರೈಸಿಕೊಳ್ಳಿ. ಆಹಾರ ಹಿತಮಿತವಾಗಿರಲಿ.

ತುಲಾ: ಕುಟುಂಬದಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಹೆಚ್ಚು ಹಣ ಖರ್ಚು ಮಾಡಲು ಹೋಗದಿರಿ. ವಿದ್ಯಾರ್ಥಿಗಳಿಗೆ ಅಧ್ಯಯನ ಗೊಂದಲ. ಆರೋಗ್ಯ ಸಮಸ್ಯೆ.

ವೃಶ್ಚಿಕ: ಮನೆಯಲ್ಲಿ ಅಭಿಪ್ರಾಯ ಭೇದ ತಲೆದೋರಬಹುದು. ನಿಮ್ಮ ಮಾತುಗಳು ವಾಗ್ವಾದಕ್ಕೆ ಕಾರಣವಾದೀತು. ದುಡುಕಬೇಡಿ.

ಧನು:
ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹೊಸ ಯೋಜನೆ ಹಾಕಿಕೊಳ್ಳ ಬೇಕಾಗುವುದು. ಕೌಟುಂಬಿಕ ಬೇಡಿಕೆ ಈಡೇರಿಸಲು ಕಷ್ಟಪಡುವಿರಿ.

ಮಕರ:
ಕೌಟುಂಬಿಕ ಒತ್ತಡ ಎದುರಿಸುವಿರಿ. ಆರ್ಥಿಕ ಅಡಚಣೆ ಚಿಂತೆಗೆ ಕಾರಣವಾಗುತ್ತದೆ. ಕುಟುಂಬ ಸದಸ್ಯರಲ್ಲಿ ಆರೋಗ್ಯ ಸಮಸ್ಯೆ ತಲೆದೋರೀತು.

ಕುಂಭ:
ಹಲವು ವಿಷಯಗಳು ಚಿಂತೆಗೆ ಕಾರಣ ವಾಗುತ್ತವೆ. ಸಣ್ಣ ವಿಷಯಗಳೂ ಮನಸ್ಸಿಗೆ ಅಸಹನೆ ಮೂಡಿಸುತ್ತವೆ. ಸಹನೆಗೆ ಹೆಚ್ಚು ಗಮನ ಕೊಡಿ.

ಮೀನ: ಒಂದೇ ದಿನ ಬಹಳಷ್ಟು ಕಾರ್ಯಗಳನ್ನು ಮಾಡಲು ಹೊರಡುತ್ತೀರಿ. ಆದರೆ ಎಲ್ಲದಕ್ಕೂ ಸೂಕ್ತ ಯೋಜನೆ ರೂಪಿಸಿ. ಇಲ್ಲವಾದರೆ ಗೊಂದಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!