ದಿನಭವಿಷ್ಯ: ಮನೆಯಲ್ಲಿ ಶಾಂತಿ ನೆಲೆಸಬೇಕಾದರೆ, ವಾಗ್ವಾದದಿಂದ ದೂರ ಇರಿ!

ಸೋಮವಾರ, 21 ಫೆಬ್ರವರಿ  2022 ಮಂಗಳೂರು

ಮೇಷ
ಗೊಂದಲದ ಮನಸ್ಥಿತಿ. ಕಾರ್ಯದಲ್ಲಿ ನಿರಾಸಕ್ತಿ. ಇದರಿಂದಾಗಿ ಉದಾಸ ಭಾವದಲ್ಲೇ ದಿನ ಕಳೆಯುವುದು. ಹುರುಪು ತಂದುಕೊಳ್ಳಿ. ಎಲ್ಲರ ಜತೆ ಬೆರೆಯಿರಿ.

ವೃಷಭ
ಕೆಲವು ವಿಷಯಗಳಲ್ಲಿ ಹೊಂದಾಣಿಕೆಯ ನಡೆ ಅವಶ್ಯ. ನಿಮ್ಮ ಅಹಂನಿಂದ ಇತರರ ಜತೆ ಬೆರೆಯಲು ಕಷ್ಟವಾದೀತು. ಸ್ವಭಾವ ತಿದ್ದಿಕೊಳ್ಳಿ.

ಮಿಥುನ
ಹೊಸ ವ್ಯವಹಾರ ಆರಂಭಿಸಲು ಸೂಕ್ತ ಕಾಲವಲ್ಲ. ಆರ್ಥಿಕವಾಗಿ ಕೆಲವರ ಮೇಲೆ ಅವಲಂಬಿತರಾಗುವಿರಿ. ಅವರ ಜತೆ ಚೆನ್ನಾಗಿ ವ್ಯವಹರಿಸಿರಿ.

ಕಟಕ
ಮನೆಯಲ್ಲಿ ಶಾಂತಿ ನೆಲೆಸಬೇಕಾದರೆ ವಾಗ್ವಾದದಿಂದ ದೂರವಿರಿ. ಕುಟುಂಬಸ್ಥರ ಸಹಕಾರ ನಿಮಗಿಂದು ದೊರಕದು. ಆರ್ಥಿಕ ಒತ್ತಡ.

ಸಿಂಹ
ಸಮಾನಾಸಕ್ತಿಯ ವ್ಯಕ್ತಿಗಳ ಜತೆ ಬೆರೆಯುವ ಅವಕಾಶ. ವಿಚಾರ ವಿನಿಮಯ. ಕೌಟುಂಬಿಕ ವಿಚಾರಗಳು ತುಸು ಕ್ಷೆಭೆಗೆ ಕಾರಣವಾದೀತು.

ಕನ್ಯಾ
ಅಂಕಿಅಂಶಗಳ ಜತೆ, ಹಣದ ಜತೆ ವ್ಯವಹರಿಸುವಾಗ ಎಚ್ಚರ ವಹಿಸಿ. ತಪ್ಪುಗಳು ಘಟಿಸಬಹುದು.ಎರಡು ದಿನ ಪ್ರಮುಖ ನಿರ್ಧಾರ ತಾಳದಿರಿ.

ತುಲಾ
ವೃತ್ತಿಯ ಹೊಣೆಗಾರಿಕೆ ಜತೆಗೇ ಕೌಟುಂಬಿಕ ಕರ್ತವ್ಯ ಕೂಡ ನೆರವೇರಿಸಿ. ಯಾವುದನ್ನೂ ಕಡೆಗಣಿಸುವುದು ತರವಲ್ಲ.

ವೃಶ್ಚಿಕ
ಸಮಸ್ಯೆಯೊಂದು ಕಾಡುತ್ತಿದ್ದರೆ ಅದಕ್ಕೆ ಪರಿಹಾರದ ದಾರಿ ಇಂದು ತೋರುವುದು. ಉದ್ಯೋಗದಲ್ಲಿ ಹೊಸ ಅವಕಾಶ. ಕೌಟುಂಬಿಕ ಸಾಮರಸ್ಯ.

ಧನು
ಪ್ರೀತಿಗೆ ಸಂಬಂಸಿ ಕೆಲವು ಮಹತ್ವದ ಬೆಳವಣಿಗೆ ಉಂಟಾದೀತು. ಸಹನೆಯಿಂದ ಮುಂದವರಿಯಿರಿ. ಸಲಹೆ ಪಡೆಯಿರಿ.

ಮಕರ
ಸಂಬಂಧದಲ್ಲಿ ಸೂಕ್ಷ್ಮ ಸಂವೇದಿಯಾಗಿ ವರ್ತಿಸುವಿರಿ. ಎಚ್ಚರದಿಂದ ನಡಕೊಳ್ಳದಿದ್ದರೆ ಆತ್ಮೀಯ ಸಂಬಂಧ ಹಾಳಾಗಬಹುದು.

ಕುಂಭ
ನಿಮ್ಮ ಜೀವನ ಶೈಲಿ ಬದಲಿಸಲು ಯೋಜಿಸಿದ್ದರೆ ಇಂದು ನಿಮಗೆ ಪೂರಕ ದಿನವಲ್ಲ. ಕೆಲವು ಅನಪೇಕ್ಷಿತ ಬೆಳವಣಿಗೆ ಉಂಟಾದೀತು.

ಮೀನ
ಶುಭ ಸಮಾಚಾರಕ್ಕೆ ಕಾಯುತ್ತಿದ್ದರೆ ಇಂದು ಸಾಕಾರವಾಗಲಿದೆ. ಆರೋಗ್ಯಕ್ಕೆ ಸಂಬಂಸಿ ತುಸು ಸಮಸ್ಯೆ ಉಂಟಾದೀತು. ಖರ್ಚು ಹೆಚ್ಚುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!