ದಿನಭವಿಷ್ಯ| ಈ ರಾಶಿಯವರಿಗೆ ಇಂದು ಹೊಸ ಆರ್ಥಿಕ ವ್ಯವಹಾರ ಆರಂಭಿಸಲು ಸಕಾಲ..

ದಿನಭವಿಷ್ಯ

ಮೇಷ
ಆರ್ಥಿಕವಾಗಿ ಹೊಸ ಅವಕಾಶ ದೊರಕಲಿದೆ. ಸಹೋದ್ಯೋಗಿಗಳ ಅಸಹಕಾರ ಕಾಡಬಹುದು. ಕೌಟುಂಬಿಕ ಶಾಂತಿಗೆ ಭಂಗ ಬಂದೀತು.

ವೃಷಭ
ವಿರಸವಿದ್ದರೆ ಮುಕ್ತವಾಗಿ ಮಾತುಕತೆ ನಡೆಸಿ. ಆ ಮೂಲಕ ಭಿನ್ನಮತ ಪರಿಹರಿಸಿಕೊಳ್ಳಿ. ನಿಮ್ಮ ನಿಲುವಿನ ಜತೆ ಹೊಂದಾಣಿಕೆ ಮಾಡಿಕೊಳ್ಳಿ.

ಮಿಥುನ
ನಿಮ್ಮ ಭಾವನೆಯನ್ನು ಆಪ್ತರ ಜತೆ ಮುಕ್ತವಾಗಿ ಹಂಚಿಕೊಳ್ಳಿ. ಆ ಮೂಲಕ ತಪ್ಪಭಿಏಡಿಡಿಪ್ರಾಯ ನಿವಾರಿಸಲು ಸಾಧ್ಯವಿದೆ. ಆರ್ಥಿಕ ಒತ್ತಡ ಕಾಡಬಹುದು.

ಕಟಕ
ನಿಮ್ಮ ಪ್ರಗತಿಗೆ ನೀವೇ ಯೋಜನೆ ಹಾಕಿಕೊಳ್ಳಬೇಕು. ಇತರರ ಮೇಲೆ ಅವಲಂಬನೆ ಸರಿಯಲ್ಲ. ಆಪ್ತರ ಹಿತವಚನಕ್ಕೆ ಕಿವಿಗೊಡಿರಿ. ಕೌಟುಂಬಿಕ ಶಾಂತಿ.

ಸಿಂಹ
ಬಂಧುಗಳಿಂದ ಅಚ್ಚರಿಯ ಸುದ್ದಿ ಸಿಗಬಹುದು. ಅದು ನಿಮಗೆ ಪೂರಕವೇ ಆಗಿರುವುದು. ಆರ್ಥಿಕ ಸಂಕಷ್ಟ ಪರಿಹಾರ, ಆತ್ಮೀಯರ ನೆರವು.

ಕನ್ಯಾ
ಸಂಬಂಧದಲ್ಲಿ ಪರಸ್ಪರ ಅರಿವು ಮುಖ್ಯ. ದೋಷಾರೋಪಣೆ ಮಾಡುತ್ತಾ ಕೂರುವುದು ಸಲ್ಲದು. ಹಿರಿಯರೊಂದಿಗೆ ತಗ್ಗಿ ಬಗ್ಗಿ ನಡೆಯಬೇಕು.

ತುಲಾ
ಹೊಸ ಆರ್ಥಿಕ ವ್ಯವಹಾರ ಆರಂಭಿಸಲು ಸಕಾಲ. ನಿಮಗೆ ಯಶ ಸಿಗಲಿದೆ. ನಿಮ್ಮ ಸುತ್ತಲಿನವರ ಕುರಿತಾದ ವದಂತಿ ನಂಬಬೇಡಿ. ಸಂಬಂಧ ಹಾಳಾದೀತು.

ವೃಶ್ಚಿಕ
ಸಂಗಾತಿಯನ್ನು ಗೌರವ ಮತ್ತು ಪ್ರೀತಿಯಿಂದ ನೋಡಿಕೊಳ್ಳಿ. ಇವುಗಳ ಕೊರತೆಯೇ ವಿರಸಕ್ಕೆ ಕಾರಣವಾದೀತು. ಇತರರ ಭಾವನೆಗೆ ಬೆಲೆ ಕೊಡಿರಿ.

ಧನು
ಕುಟುಂಬ ಸದಸ್ಯರ ಜತೆ ಆತ್ಮೀಯ ಕಾಲಕ್ಷೇಪ. ವಿಚಾರ ವಿನಿಮಯ. ಆರ್ಥಿಕ ಗುರಿ ಸಾಧನೆ. ನಿಮ್ಮ ಕುರಿತಾದ ಟೀಕೆಗಳನ್ನು ಪರಿಗಣಿಸಬೇಡಿ.

ಮಕರ
ಮಾನಸಿಕ ಕಿರಿಕಿರಿ ಬಾಧಿಸಬಹುದು. ಹಾಗೆಂದು ಎಲ್ಲರ ಮೇಲೆ ಅಸಹನೆ ಕಾರಬೇಡಿ. ಸಹನೆಯಿಂದ ಕಾರ್ಯ ನಿಭಾಯಿಸಿ. ಬಂಧುತ್ವ ಕಾಯ್ದುಕೊಳ್ಳಿ.

ಕುಂಭ
ವೃತ್ತಿಯಲ್ಲಿ ಎಲ್ಲರೂ ನಿಮ್ಮ ಮಾರ್ಗದರ್ಶನ ಪಾಲಿಸುವರು. ಇದರಿಂದ ನಿಮ್ಮ ಘನತೆ ಹೆಚ್ಚಲಿದೆ. ಕೌಟುಂಬಿಕ ಸಾಮರಸ್ಯ ಮತ್ತು ಸಹಕಾರ.

ಮೀನ
ಬದಲಾವಣೆಗೆ ಹೊಂದಿಕೊಳ್ಳಲು ಕಲಿಯಿರಿ. ಜಿಗುಟು ನಿಲುವು ತಳೆಯದಿರಿ. ಕೆಲವು ವಿಷಯಗಳು ಮಾನಸಿಕ ಒತ್ತಡ ಹೇರುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!