ಟ್ರ್ಯಾಕ್ಟರ್ ಮಗುಚಿ ಯುವಕ ಸಾವು

ಹೊಸದಿಗಂತ ವರದಿ, ಹಲಗೂರು:

ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ಮುಗುಚಿ ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಮೀಪದ ಕರಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಮೀಪದ ಕರಡಹಳ್ಳಿ ಗ್ರಾಮದ ರಾಜಣ್ಣ ರವರ ಪುತ್ರ ಪ್ರಶಾಂತ್ (26) ಮೃತ ವ್ಯಕ್ತಿ.
ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಬದುವಿನ ಪಕ್ಕ ಇದ್ದ ಹಳ್ಳಕ್ಕೆ ಟ್ರ್ಯಾಕ್ಟರ್ ಅಯತಪ್ಪಿ ಉರುಳಿ ಬಿದ್ದಿದೆ. ಟ್ರ್ಯಾಕ್ಟರ್‌ನಲ್ಲಿ ರೋಟವೇಟರ್ ಅಳವಡಿಸಿದ್ದ ಪರಿಣಾಮ ಪ್ರಶಾಂತನಿಗೆ ಬಲವಾದ ಪೆಟ್ಟಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!