ದಕ್ಷಿಣ ಕನ್ನಡ, ಕೊಡಗು ಗಡಿ ಭಾಗದಲ್ಲಿ ಕಂಪನ: ಸ್ಪಷ್ಟನೆ ನೀಡಿದ ವಿಪತ್ತು ನಿರ್ವಹಣಾ ಪರಿಣಿತರು

ಹೊಸದಿಗಂತ ವರದಿ,ಕೊಡಗು:

ದಕ್ಷಿಣ ಕನ್ನಡ, ಕೊಡಗು ಗಡಿಭಾಗದಲ್ಲಿ ಸಂಜೆ ವೇಳೆ ಭೂಕಂಪನ ಅನುಭವ ಆಗಿರುವ ಘಟನೆಗೆ ಸಂಭವಿಸದಂತೆ ವಿಪತ್ತು ನಿರ್ವಹಣಾ ಪರಿಣಿತರು ಸ್ಪಷ್ಟನೆ ನೀಡಿದೆ.
ಇಂದು ಸಂಜೆ ಸುಮಾರು 4  ಅವಧಿಯಲ್ಲಿ ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ಸಮೀಪದಲ್ಲಿ ಶಬ್ದ ಉಂಟಾಗಿದೆ ಹಾಗೂ ಕಂಪನದ ಅನುಭವವಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ದೂರು ಬಂದಿರುತ್ತದೆ. ಈ ಮಾಹಿತಿಯನ್ನು ಕರ್ನಾಟಕ ನೈಸರ್ಗಿಕ ವಿಕೋಪ ನಿರ್ವಹಣಾ ಉಸ್ತುವಾರಿ ಕೇಂದ್ರಕ್ಕೆ ರವಾನಿಸಿದಾಗ ಮಾಹಿತಿಯನ್ನು ಅವಲೋಕಿಸಿ ಯಾವುದೇ ರೀತಿಯ ಭೂಕಂಪನ ವರದಿಯಾಗಿಲ್ಲ ಎಂದು ತಿಳಿಸಿರುತ್ತಾರೆ. ಹೀಗಾಗಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಪಡಬಾರದೆಂದು ಎಂದು ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಆರ್.ಎಂ.ಅನನ್ಯ ವಾಸುದೇವ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!