ಕೆನಡಾದಲ್ಲಿ ಮೀನುಹಿಡಿಯಲು ಹೋದ ಕೇರಳಿಗರಿಬ್ಬರು ಜಲಸಮಾಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೆನಡಾದ ಕ್ಯಾನ್ಮೋರ್, ಕ್ಯಾಲ್ಗರಿದಲ್ಲಿ ನಡೆದ ದೋಣಿ ದುರಂತದಲ್ಲಿ ಕೇರಳದ ಯುವಕರಿಬ್ಬರು ಸಾವನ್ನಪ್ಪಿದ್ದಾರೆ.
ಈ ಘಟನೆಯಲ್ಲಿ ಓರ್ವ ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ಮುಂದುವರಿದಿದೆ.
ಕೇರಳದ ಎರ್ನಾಕುಲಂ ಜಿಲ್ಲೆಯ ಜಿಯೋ ಪೈಲಿ (33), ಕೆವಿನ್ ವರ್ಗೀಸ್ (21) ಮೃತಪಟ್ಟವರಾಗಿದ್ದರೆ, ಲಿಯೊ ಮ್ಯಾಥ್ಯೂ (41) ನಾಪತ್ತೆಯಾದವರು. ಇದೇ ಅವಘಡದಲ್ಲಿ ತ್ರಿಶೂರ್ ಮೂಲದ ಜೀಜೋ ಜೋಸೆಫ್ ಎಂಬವರನ್ನು ರಕ್ಷಿಸಲಾಗಿದೆ.
ಸ್ಪ್ರೇ ಲೇಕ್ ಜಲಾಶಯದಲ್ಲಿ ಜಿಯೋ ಅವರಿಗೆ ಸೇರಿದ ಬೋಟ್ ನಲ್ಲಿ ಎಲ್ಲಾ ನಾಲ್ಕೂ ಮಂದಿ ಮೀನು ಹಿಡಿಯುವುದಕ್ಕೆ ಹೋಗಿದ್ದರು. ಈ ವೇಳೆ ದೋಣಿ ಆಕಸ್ಮಿಕವಾಗಿ ತಲೆಕೆಳಗಾಗಿ ಜಲಾಶಯದ ಶೀತಲೀಕರಣಗೊಂಡಿದ್ದ ನೀರಿಗೆ ಬಿದ್ದಿದೆ ಎಂದು ವರದಿಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!