ಸಿಡಿಲು ಬಡಿತಕ್ಕೆ ಜೋಡೆತ್ತು ಬಲಿ

ಹೊಸದಿಗಂತ ವರದಿ ಕಲಬುರಗಿ:‌ 

ಕಲಬುರಗಿ ಜಿಲ್ಲೆಯಾದ್ಯಂತ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯ ನಡುವೆ, ಸಿಡಿಲು ಬಡಿತಕ್ಕೆ ಜೋಡೆತ್ತು ಬಲಿಯಾಗಿವೆ.

ಜಿಲ್ಲೆಯ ಕಾಳಗಿ ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಗ್ರಾಮದ ರೈತ ಸಿದ್ದಣ್ಣಾ ಗುರುಲಿಔಗಪ್ಪಾ ಹೊಸಳ್ಳಿ ಎಂಬುವವರಿಗೆ ಸೇರಿದ ಎತ್ತುಗಳಾಗಿವೆ.

ಸಾಲ ಸೂಲ ಮಾಡಿ ಜೋಡೆತ್ತುಗಳನ್ನು ತಂದಿದ್ದ ರೈತ ಸಿದ್ದಪ್ಪಾ, ಹೊಲದಲ್ಲಿ ಮೇಯಿಸಿ ಗಿಡದ ಕೆಳಗೆ ಕಟ್ಟಿದಾಗ ಸಿಡಿಲು ಬಡಿದು ಎತ್ತುಗಳು ಮೃತಪಟ್ಟಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಳಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!