ಹೊಸದಿಗಂತ ವರದಿ ಗದಗ:
ರಾಜ್ಯಾದ್ಯಂತ ಪಿಎಫ್ಐ ಸಂಘಟನೆ ಕಾರ್ಯಕರ್ತರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅದರಂತೆ ಗದಗ ನಗರದಲ್ಲಿಯೂ ಸಹ ಪಿಎಫ್ಐ ಸಂಘಟನೆ ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಸಿ, ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ. ರಹೆಮತ್ ನಗರದ ನಿವಾಸಿ ರುಸ್ತುಂ ಗೌಂಡಿ ಹಾಗೂ ಕಾಗದಗಾರ ಓಣಿಯ ನಿವಾಸಿ ಸರ್ಪರಾಜ ದಂಡಿನ ಬಂಧಿತ ಕಾರ್ಯಕರ್ತರು.
ಸಿಪಿಐ ಜಯಂತ ಗೌಳಿ ನೇತೃತ್ವದಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಠಾಣೆಗೆ ಕರೆ ತಂದು ವಿಚಾರಣೆ ನಡೆಸಿ, ಬಳಿಕ ಗದಗ ತಹಶೀಲ್ದಾರ ಕಿಶನ್ ಕಲಾಲ ಮುಂದೆ ಹಾಜರುಪಡಿಸಿದ್ದಾರೆ. ಬಂಧಿತ ರುಸ್ತುಂ ಗೌಂಡಿ ಹಾಗೂ ಸರ್ಪರಾಜ್ ದಂಡಿನ ಇಬ್ಬರನ್ನೂ ಅಕ್ಟೋಬರ್ 2 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಎಂದು ಗದಗ ತಹಶೀಲ್ದಾರ್ ಕಿಶನ್ ಕಲಾಲ ಆದೇಶಿಸಿದರು.