ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ವೇದಿಕೆಗಳಲ್ಲಿ ಭಾರತದ ವಿದೇಶಾಂಗ ನೀತಿಯನ್ನು ವಿದೇಶಾಂಗ ಸಚಿವ ಎಸ್ ಜೈಂಕರ್ ಪ್ರತಿಪಾದಿಸುತ್ತಿರುವ ರೀತಿ ಪ್ರಭಾವಶಾಲಿಯಾಗಿದೆ ಎಂದು ಯುಎಇಯ ಕೃತಕ ಬುದ್ಧಿಮತ್ತೆಯ ರಾಜ್ಯ ಸಚಿವ ಒಮರ್ ಸುಲ್ತಾನ್ ಅಲ್ ಒಲಾಮಾ ಶ್ಲಾಘಿಸಿದ್ದಾರೆ.
ಜೈಶಂಕರ್ ಅವರು ಭೌಗೋಳಿಕ ರಾಜಕೀಯ ಹಗ್ಗಜಗ್ಗಾಟದ ನಡುವೆ ವಿಶ್ವ ವೇದಿಕೆಯಲ್ಲಿ ಭಾರತದ ವಿದೇಶಾಂಗ ನೀತಿಯನ್ನು ಹೇಗೆ ಇರಿಸುತ್ತಾರೆ ಎಂಬುದರ ಬಗ್ಗೆ ನಾನು ತುಂಬಾ ಪ್ರಭಾವಿತನಾಗಿದ್ದೇನೆ ಎಂದು ಸುಲ್ತಾನಾ ಅಲ್ ಒಲಾಮಾ ಹೇಳಿದ್ದಾರೆ.
ದೆಹಲಿ ಮೂಲದ ಥಿಂಕ್ ಟ್ಯಾಂಕ್ನಲ್ಲಿ ನಡೆದ ‘CyFY2022’ ಸಮಾವೇಶದಲ್ಲಿ ಭೌಗೋಳಿಕ ರಾಜಕೀಯ ಹೆದ್ದೆರೆಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಒಮರ್ ಸುಲ್ತಾನ್ ಅಲ್ ಒಲಾಮಾ, “ಐತಿಹಾಸಿಕವಾಗಿ, ಜಗತ್ತು ಏಕಧ್ರುವ, ಎರಡು ಧ್ರುವ ಅಥವಾ ಮೂರು ಧ್ರುವಗಳಾಗಿ ವಿಗಂಡನೆಯಾಗಿತ್ತು.ಅಲ್ಲಿ ನೀವು ಬದಿಗಳನ್ನು ಆರಿಸಬೇಕಾಗಿತ್ತು. ಆದರೆ ನಿಮ್ಮ ವಿದೇಶಾಂಗ ವ್ಯವಹಾರಗಳ ಸಚಿವರಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ ಅವರ ಕೆಲವು ನಿಲುವನ್ನು ನಾನು ಗಮನಿಸಿದ್ದೇನೆ. ಅವರ ಭಾಷಣಗಳಲ್ಲಿ ಯುಎಇ ಮತ್ತು ಭಾರತ ಎರಡಕ್ಕೂ ಒಂದು ವಿಷಯ ಸ್ಪಷ್ಟವಾಗಿದೆ, ನಾವು ಬದಿಗಳನ್ನು ಆಯ್ಕೆ ಮಾಡುವ ಅಗತ್ಯವಿಲ್ಲ” ಎಂದಿದ್ದಾರೆ.
“ಕೆಲವು ಸನ್ನಿವೇಶಗಳಲ್ಲಿ ಭೌಗೋಳಿಕ ರಾಜಕೀಯವನ್ನು ಕೆಲವು ಪಕ್ಷಗಳ ಹಿತದೃಷ್ಟಿಯಿಂದ ನಿರ್ಧರಿಸಲಾಗುತ್ತದೆ. ಆದರೆ ಐತಿಹಾಸಿಕವಾಗಿ ಅಸ್ತಿತ್ವದಲ್ಲಿದ್ದ ಮಾದರಿ ದುರದೃಷ್ಟವಶಾತ್ ಇಲ್ಲಿಲ್ಲ. ಇಂದು ದೇಶವು ತನ್ನ ಹಿತಾಸಕ್ತಿಗಳ ಬಗ್ಗೆ ಯೋಚಿಸಬೇಕಾಗಿದೆ.” ಎಂದು ಅವರು ಅಭಿಪ್ರಾಯ ಪಟ್ಟಿರುವ ಅವರು ಭಾರತದೊಂದಿಗೆ ಯುಎಇಯ ಸಂಬಂಧಗಳನ್ನೂ ಕೂಡ ಶ್ಲಾಘಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.