ಕೇಂದ್ರ ಸಚಿವ ಪಿಯೂಶ್ ಗೋಯಲ್ ಕಾರ್ಯಕ್ರಮದಲ್ಲಿ ಭಾರತ ಮಾತೆ ಭಾವಚಿತ್ರಕ್ಕೆ ಅಪಮಾನ?

ಹೊಸದಿಗಂತ ವರದಿ ತುಮಕೂರು :

ಕೇಂದ್ರ ಸಚಿವ ಪಿಯೂಶ್ ​ಗೋಯಲ್ ಅವರು ಭಾಗವಹಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾರತ ಮಾತೆಗೆ ಅಪಮಾನವೆಸಗಿರುವಂತಹ ಘಟನೆ ನಡೆದಿದೆ ಎಂದು ಕೇಳಿಬಂದಿದೆ.

ನಗರದ ಸ್ನೇಹ ಸಂಗಮ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ವಾಣಿಜ್ಯೋದ್ಯಮಿಗಳು, ಲೆಕ್ಕ ಪರಿಶೋಧಕರು ಮತ್ತು ವಿವಿಧ ವಾಣಿಜ್ಯ ಸಂಘಟನೆಗಳ ಪ್ರತಿನಿಧಿಗಳು ಜ್ಯೋತಿ ಬೆಳಗಲು ವೇದಿಕೆಗೆ ಹೋಗುವಾಗ ಭಾರತ ಮಾತೆಯ ಭಾವಚಿತ್ರದ ಎದುರು ಶೂ ಬಿಟ್ಟಿದ್ದಾರೆ.

ಈ ಕುರಿತು ಎಲ್ಲೆಡೆ ಟೀಕೆಗಳು ಕೇಳಿಬರುತ್ತಿವೆ. ವೇದಿಕೆ ಮೇಲೆ ಭಾರತ ಮಾತೆ ಫೋಟೋ ಇಟ್ಟು ಪೂಜೆ ಮಾಡಲಾಗಿತ್ತು. ಅವಸರದಲ್ಲಿ ಭಾರತ ಮಾತೆ ಫೋಟೋಗೆ ಪುಷ್ಟ ನಮನ ಮಾಡುವುದನ್ನು ಸಹ ಮರೆತಿದ್ದಾರೆ. ಈ ಮೂಲಕ ಭಾರತ ಮಾತೆಗೆ ಅಪಮಾನ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!